ಉದ್ಯೋಗ ನೀಡುವುದಾಗಿ ಹಣ ಪಡೆದು ವಂಚನೆ- ದೂರು ದಾಖಲು

0

2 ಲಕ್ಷಕ್ಕೂ ಅಧಿಕ ಹಣ ನೀಡಿ ವಂಚನೆಗೊಳಗಾದ ಒಳತ್ತಡ್ಕದ ಯುವತಿ

ಪುತ್ತೂರು: ಉದ್ಯೋಗ ನೀಡುವುದಾಗಿ  ಆರ್ಯಾಪು ಗ್ರಾಮದ ಒಳತ್ತಡ್ಕ ದ ಯುವತಿಯೊಬ್ಬರಿಂದ 7 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿರುವ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ.

ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೊಳಗಾಗಿದ್ದು. ಅವರು ಪೊಲೀಸರಿಗೆ  ದೂರು ನೀಡಿದ್ದಾರೆ. 2023 ರ ಜೂ.12 ರಂದು ಪತ್ರಿಕೆಯೊಂದರಲ್ಲಿ ಪರಿಶೀಲಿಸಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆಮಾಡಿ ವಿಚಾರಿಸಿ,  ಬಳಿಕ ಅವರುಗಳು ಸೂಚಿಸಿದಂತೆ 2023 ರ ಜೂ.28 ರಿಂದ 2024 ರ ಜ.12 ರ ತನಕ  ಹಂತ ಹಂತವಾಗಿ ಅಪರಿಚಿತ ಆರೋಪಿ ತಿಳಿಸಿದ‌ ಬ್ಯಾಂಕ್‌ ಖಾತೆಗಳಿಗೆ ಒಟ್ಟು 2,25,001 ರೂ ಹಣವನ್ನು ಪಾವತಿ ಮಾಡಿದ್ದು, ಈವರೆಗೂ ನಿಶ್ಮಿತಾ ಅವರಿಗೆ ಉದ್ಯೋಗವನ್ನೂ ನೀಡದೇ, ಹಣವನ್ನು ಮೋಸದಿಂದ ಪಡೆದು ವಂಚಿಸಿರುತ್ತಾರೆ. ಈ ಕುರಿತು ಅವರು ನೀಡಿದ  ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 18-2024 ಕಲಂ:417, 420 IPC ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here