ಜವುಳಿ ಖರೀದಿಗೆ ಡಿಸ್ಕೌಂಟ್‌ನೊಂದಿಗೆ ಸ್ಪೆಷಲ್ ಗಿಫ್ಟ್….! ಸ್ನೇಹ ಸಿಲ್ಕ್ಸ್&ರೆಡಿಮೇಡ್ಸ್‌ನಲ್ಲಿ ವಿಶೇಷ ವಾರ್ಷಿಕ ಸಂಭ್ರಮ

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆಗಳಲ್ಲಿ ಒಂದಾಗಿರುವ ಬೊಳುವಾರಿನ ಸ್ನೇಹ ಸಿಲ್ಕ್ಸ್ & ರೆಡಿಮೇಡ್ಸ್‌ನಲ್ಲಿ ಗ್ರಾಹಕರಿಗೆ ವಿಶಿಷ್ಠ ಕೊಡುಗೆಗಳನ್ನು ನೀಡುವ ಮೂಲಕ ವಿಶೇಷ ವಾರ್ಷಿಕ ಸಂಭ್ರಮವನ್ನು ಆಚರಿಸುತ್ತಿದೆ.

ಸಂಸ್ಥೆಯ ವಾರ್ಷಿಕ ಸಂಭ್ರಮವನ್ನು ತಾನು ಮಾತ್ರ ಆಚರಿಸದೆ ತನ್ನ ಗ್ರಾಹಕರಿಗೂ ಆಚರಿಸಲು ಅವಕಾಶ ಕಲ್ಪಿಸುತ್ತಿದೆ. ವಸ್ತ್ರಗಳ ಖರೀದಿಗೆ ಡಿಸ್ಕೌಂಟ್‌ನೊಂದಿಗೆ ಸ್ಪೆಷಲ್ ಗಿಫ್ಟ್‌ಗಳನ್ನು ಪಡೆಯುವ ಸದಾವಕಾಶವನ್ನು ಸಂಸ್ಥೆ ನೀಡುತ್ತಿದೆ. ಗುಣಮಟ್ಟದಲ್ಲಿ ಶ್ರೇಷ್ಠತೆ ಹಾಗೂ ಹಣದಲ್ಲಿ ಗರೀಷ್ಠ ಉಳಿತಾಯ ಜೊತೆಗೆ ಉಡುಗೊರೆಗಳನ್ನು ಪಡೆಯುವ ಅವಕಾಶ ಗ್ರಾಹಕರಿಗಾಗಿ ಕಲ್ಪಿಸಲಾಗಿದೆ. ಸಿಲ್ಕ್ ಸಾರಿ, ಕಂಜೀವರಂ ಸಾರಿ, ಸಾಫ್ಟ್ ಸಿಲ್ಕ್ ಸಾರಿ, ಮಕ್ಕಳ ರೆಡಿಮೆಡ್ ಡ್ರೆಸ್ಸುಗಳು, ಲೇಡಿಸ್ ವೆಸ್ಟರ್ನ್ ಡ್ರೆಸ್ಸುಗಳ ಅಮೋಘ ಸಂಗ್ರಹವಿದೆ. ಮಕ್ಕಳ, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ಡಿಸ್ಕೌಂಟ್ ಜೊತೆಗೆ ಸ್ಪೆಷಲ್ ಗಿಫ್ಟ್ ದೊರೆಯಲಿದೆ. ಕಂಪನಿಯಿಂದ ನೇರವಾಗಿ ಗ್ರಾಹಕರಿಗೆ ದೊರೆಯುತ್ತಿದ್ದ ಗುಣಮಟ್ಟದ ಬಟ್ಟೆಗಳ ಖರೀದಿ ಜೊತೆಗೆ ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಿ ಹಣ ಉಳಿತಾಯವೂ ಮಾಡಬಹುದು. ಜ.25ರಿಂದ ಪ್ರಾರಂಭಗೊಂಡಿರುವ ವಿಶೇಷ ವಾರ್ಷಿಕ ಸಂಭ್ರಮವು ಸೀಮಿತ ದಿನಗಳ ವರೆಗೆ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ವಿಫುಲ ಆಯ್ಕೆ… ಹೇರಳ ವಿನ್ಯಾಸ.. ಸರಳ ಬೆಲೆ…
ಇದು ಜವುಳಿ ಮಳಿಗೆಗಳಲ್ಲಿ ಗ್ರಾಹಕರು ಬಯಸುವ ರೀತಿ. ವಿನ್ಯಾಸ ಮತ್ತು ಗುಣಮಟ್ಟ ಖಾತ್ರಿಯಿದ್ದಲ್ಲಿ, ಸರಳ ಬೆಲೆಯೂ ಆಗಿದ್ದಲ್ಲಿ ಅಲ್ಲಿ ಗ್ರಾಹಕರ ದಂಡೇ ದೌಡಾಯಿಸುವುದರಲ್ಲಿ ಸಂಶಯವಿಲ್ಲ. ಪುತ್ತೂರಿಗರ ಮನ ತಣಿಸುವ ವಸ್ತ್ರ ವಿನ್ಯಾಸಗಳು ಹಾಗೂ ವಿಫುಲ ಆಯ್ಕೆಗಳ ಅವಕಾಶಗಳೊಂದಿಗೆ ಜವುಳಿ ಉದ್ಯಮದಲ್ಲಿ 29 ವರ್ಷಗಳಿಂದ ಸುದೀರ್ಘ ಅನುಭವಗಳೊಂದಿಗೆ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿ ಇರುವ ಶಿವಗುರು ಕಾಂಪ್ಲೆಕ್ಸ್‌ನಲ್ಲಿ 3 ಅಂತಸ್ತುಗಳನ್ನು ಹೊಂದಿರುವ ಸ್ನೇಹ ಜವುಳಿ ಮಳಿಗೆ ಜವುಳಿ ಉದ್ಯಮ ಕ್ಷೇತ್ರದಲ್ಲಿ ಹೊಸ ವಾತಾವರಣ ಸೃಷ್ಟಿಸಿದೆ. ಸುಮಾರು 4500 ಚದರ ಅಡಿ ವಿಸ್ತೀರ್ಣದ ಸ್ವಂತ ಕಟ್ಟಡದಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಮಳಿಗೆ, ವಿಶಾಲವಾದ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ವ್ಯವಸ್ಥೆಯನ್ನು ಒಳಗೊಂಡಿದೆ.


ಪ್ರವರ್ತಕರ ಬಗ್ಗೆ :
ಸಂಸ್ಥೆಯ ಮ್ಹಾಲಕರಾದ ಸತೀಶ್ ಎಸ್.ರವರು 1990ರಿಂದ ಜವುಳಿ ಉದ್ಯಮ ಕ್ಷೇತ್ರದಲ್ಲಿದ್ದು, ಉದ್ಯಮದ ಪ್ರತಿಯೊಂದು ಏಳುಬೀಳುಗಳನ್ನು ಅರ್ಥೈಸಿ ಪುತ್ತೂರು ಸುಳ್ಯ ಭಾಗದಲ್ಲಿ ಅನೇಕ ಜವುಳಿ ಉದ್ಯಮಗಳನ್ನು ನಡೆಸಿ ಯಶಸ್ಸು ಸಾಧಿಸಿದವರು. ತನ್ನ ಶಿಕ್ಷಣದ ಅವಧಿಯಲ್ಲಿ ಉಜಿರೆಯ ರತ್ನ ಮಾನಸ ಹಾಸ್ಟೆಲ್‌ನಲ್ಲಿದ್ದು, ಅಲ್ಲಿ ಸ್ವ-ಉದ್ಯೋಗದ ಬಗ್ಗೆ ಸಾಕಷ್ಟು ತರಬೇತಿಯನ್ನು, ಅನುಭವವನ್ನೂ ಹೊಂದಿದ್ದರು. ಅಲ್ಲಿನ `ಜೀವನ ಶಿಕ್ಷಣ’ ಪರಿಕಲ್ಪನೆ ಸ್ವಾವಲಂಬನೆ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಿತ್ತು. ಬಳಿಕ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಶಿಕ್ಷಣ ಮಾಡಿ ಹಲವು ಕಡೆ ಉದ್ಯಮ ಆರಂಭಿಸಿದ್ದರು. ತಯಾರಕರು ಮತ್ತು ವಿತರಕರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ತಾನು ಉದ್ಯಮ ನಡೆಸಿದ್ದಲ್ಲದೇ ತನ್ನೊಡನೆ ಇದ್ದವರಿಗೂ ಇಂತಹ ಉದ್ಯಮ ನಡೆಸಲು ಪ್ರೋತ್ಸಾಹ ನೀಡಿ ಅವರನ್ನೂ ಉದ್ಯಮದಲ್ಲಿ ಮೇಲಕ್ಕೆತ್ತುವ ಕಾರ್ಯ ನಡೆಸಿ ಯಶಸ್ಸು ಸಾಧಿಸಿದವರು ಸತೀಶ್ ಎಸ್.ರವರು. ಭಾರತದಾದ್ಯಂತ ಸಂಚರಿಸಿ ಜವುಳಿ ತಯಾರಕರೊಡನೆ ಸಂಪರ್ಕ ಮತ್ತು ಅನುಭವ ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here