ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಶ್ರಮದಾನ, ಸ್ವಚ್ಛತಾ ಪರಿಕರ ಕೊಡುಗೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬೆಳಕು ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಜ.28 ರಂದು ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯ ಅರುಣಾ ರೈ ಬಿಜಳ, ಕುಂಬ್ರ ಸೇವಾ ಪ್ರತಿನಿಧಿ ಶಶಿಕಲಾ ಪಿ ರೈ, ಉಪಾಧ್ಯಕ್ಷೆ ಆಶಾಲತಾ ಎಮ್ ರೈ ಕುಂಬ್ರ, ಜ್ಞಾನ ವಿಕಾಸದ ಸಂಯೋಜಕಿ ರಾಜೀವಿ ಕೆ ಕುಂಬ್ರ, ಗೀತಾ ಅಲಂಗೂರು, ಸುಗುಣ ಉರ್ವ, ಶಶಿಕಲಾ ಕುಂಬ್ರ ,ಲಲಿತಾ ಕುಂಬ್ರ, ರಾಜೀವಿ ಕೆ, ಶಶಿಕಲಾ ಅಲಂಗೂರು ಬಾಳಪ್ಪ ಮುಡಾಲ , ಶಿವಪ್ಪ ಮುಡಾಲರವರುಗಳು ಉಪಸ್ಥಿತರಿದ್ದರು.
ಸ್ವಚ್ಛತಾ ಕಿಟ್ ಕೊಡುಗೆ
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕುಂಬ್ರ ಒಕ್ಕೂಟದ ಮಾಜಿ ಅಧ್ಯಕ್ಷ ತಾರಾನಾಥ ಶೆಟ್ಟಿ ಮುಡಾಲ ಮತ್ತು ಕುಂಬ್ರ ವಲಯಧ್ಯಕ್ಷ ಎಸ್ ಮಾಧವ ರೈ ಕುಂಬ್ರರವರು ಸುಮಾರು ರೂ.2 ಸಾವಿರ ಮೌಲ್ಯದ ಸ್ವಚ್ಛತೆ ಕಿಟ್ ನ್ನು ಶ್ರೀ ಉಳ್ಳಾಕುಲು ದೈವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ ಮುಗೇರುರವರು ಕೊಡುಗೆಯನ್ನು ಸ್ವೀಕರಿಸಿ ಪ್ರಸಾದ ನೀಡಿ ಸತ್ಕರಿಸಿದರು.

LEAVE A REPLY

Please enter your comment!
Please enter your name here