ರಾಮಾಯಣ,ಮಹಾಭಾರತ ಪರೀಕ್ಷೆ:ವಿವೇಕಾನಂದ ಆ.ಮಾ ಶಾಲಾ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿಯೊಂದಿಗೆ ಚಿನ್ನದ ಪದಕ

0

ಪುತ್ತೂರು : ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು 8ನೇ ಮತ್ತು 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನಾಧರಿಸಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಶೈಕ್ಷಣಿಕ  2023 -24 ರಲ್ಲಿ ಸಂಘಟಿಸಲಾದ ಪರೀಕ್ಷೆಗಳಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 450 ವಿದ್ಯಾರ್ಥಿಗಳು ಭಾಗವಹಿಸಿದ್ದು, ತೇರ್ಗಡೆ ಹೊಂದಿರುತ್ತಾರೆ. 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ಬಂಗಾರದ ಪದಕಗಳಿಗೆ ಭಾಜನರಾಗಿರುತ್ತಾರೆ.

ರಾಮಾಯಣ ವಿಬಾಗದಲ್ಲಿ ಎಂಟನೆಯ ತರಗತಿಯ ಅಪೇಕ್ಷಾ ಎನ್ , ಸಾನ್ವಿ ಎಸ್ ಪ್ರಭು , ಅವನಿ ಘಾಟೆ ಮತ್ತು ಸಾನ್ವಿಕಾ ಎಸ್ ಹಾಗೂ ಮಹಾಭಾರತ ವಿಭಾಗದಲ್ಲಿ ಒಂಭತ್ತನೆಯ ತರಗತಿಯ ಸಾನ್ವಿಕಾ ಎಸ್ ರೈ, ಪ್ರಣವ ಕೃಷ್ಣ , ಆದೀಶ್ ಜೈನ್, ಮತ್ತು ತೇಜಸ್ ಕೆ ಆರ್. ಇವರು ಚಿನ್ನದ ಪದಕಕ್ಕೆ ಭಾಜನರಾದ ವಿದ್ಯಾರ್ಥಿಗಳು ಎಂಬುದಾಗಿ ಶಾಲಾ ಮುಖ್ಯ ಗುರುಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here