![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಕಾಂಚನ ಒಕ್ಕೂಟದಿಂದ ಚಿಗುರು ಸಂಘದ ಸದಸ್ಯೆ ಲಕ್ಷ್ಮಿಯವರ ಪತಿ ಚಂದ್ರ ಅವರಿಗೆ ವಾಕರ್ ಹಾಗೂ ಸಂಗೀತ ಸಂಘದ ಸದಸ್ಯೆ ನೀಲಮ್ಮರವರಿಗೆ ವಾಕಿಂಗ್ ಸ್ಟಿಕ್ ಕೊಡುಗೆಯಾಗಿ ನೀಡಲಾಯಿತು.
![](https://puttur.suddinews.com/wp-content/uploads/2024/03/1.jpg)
ಯೋಜನೆಯ ಉಪ್ಪಿನಂಗಡಿ ವಲಯದ ಅಧ್ಯಕ್ಷ ನಾರಾಯಣ ಕೆಳಗಿನಮನೆ, ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ, ಕಾಂಚನ ಒಕ್ಕೂಟದ ಅಧ್ಯಕ್ಷ ದಿನೇಶ್ ಮೇಲೂರು, ವಲಯದ ಮೇಲ್ವಿಚಾರಕ ಶಿವಪ್ಪ ಎಂ.ಕೆ., ಇವರ ಮಾರ್ಗದರ್ಶನದಲ್ಲಿ ವಿತರಣೆ ಮಾಡಲಾಯಿತು. ಚಿಗುರು ಸಂಘದ ಸದಸ್ಯರು, ಕಾಂಚನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/03/2.jpg)