![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕೆಯ್ಯೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕೆಯ್ಯೂರಿನ ಶ್ರೀದುರ್ಗಾ ಯುವಕ ಮಂಡಲ ಕೆಯ್ಯೂರು ಸಭಾಭವನದಲ್ಲಿ ಕೇಕ್ ಕತ್ತರಿಸುವ ಮೂಲಕ “ವಿಧಾತ್ರಿ” ನೂತನ ಮಹಿಳಾ ಮಂಡಲವನ್ನು ಮಾ.9ರಂದು ರಚಿಸಲಾಯಿತು.
![](https://puttur.suddinews.com/wp-content/uploads/2024/03/IMG-20240309-WA0000.jpg)
ಈ ಸಂದರ್ಭದಲ್ಲಿ ಕೆಪಿಎಸ್ ಆಂಗ್ಲ ಮಾಧ್ಯಮ ಶಿಕ್ಷಕಿ ಸೌಮ್ಯ ರೈ ಮಾತನಾಡಿ, “ಯಾವುದೇ ಪಕ್ಷ ಸಿದ್ದಾಂತಗಳಿಲ್ಲದೆ, ನಾಲ್ಕು ಜನರಿಗೆ ಮಾದರಿಯಾಗುವ ಉದ್ದೇಶದಿಂದ ಈ ನೂತನ ಮಹಿಳಾ ಮಂಡಲ ರಚನೆಯಾಗಿದೆ ಎಂದು ಶುಭ ಹಾರೈಸಿದರು.
![](https://puttur.suddinews.com/wp-content/uploads/2024/03/IMG-20240309-WA0001-1.jpg)
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಪದಾಧಿಕಾರಿಗಳಾದ ಲತಾ ಕೈತ್ತಡ್ಕ, ಶುಭಾಷಿಣಿ ಸಣಂಗಳ, ಸುಮಿತ್ರಾ ಪಲ್ಲತ್ತಡ್ಕ, ಲಾವಣ್ಯಸಿ ರೈ , ಮೀನಾಕ್ಷಿ ವಿ. ರೈ, ವೇದಾವತಿ ರೈ, ವನಜಾಕ್ಷಿ ರೈ, ಉಷಾ, ಅನಿತಾ, ಸುಜಯ, ಶಾರದ, ಹರ್ಷಿತ, ಸಂಗೀತ, ಅರ್ಚನಾ ರೈ, ರೂಪ ರೈ ಮತ್ತು ಮಕ್ಕಳು ಉಪಸ್ಥಿತರಿದ್ದರು. ಜ್ಯೋತಿ ಕೆಯ್ಯೂರು ಸ್ವಾಗತಿಸಿ, ವಂದಿಸಿದರು.