ಅರಿಪ್ಪಳ ಶ್ರೀವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬಯಲು ಕೋಲ

0

ಪುತ್ತೂರು:ನೆಟ್ಟಣಿಗೆ ಮುಡ್ನೂರು ಗ್ರಾಮದ ಅರಿಪ್ಪಳ ಎಂಬಲ್ಲಿ ನವೀಕೃತ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ ನಡೆದು ದೈವದ ಬಯಲುಕೋಲ ನಡೆಯಿತು.

ಮಾ.28ರಂದು ಸಂಜೆ ದೈವದ ಭಂಡಾರ ಏರಿ ತೊಡಂಞಲ್, ಭಜನೆ, ಅನ್ನಸಂತರ್ಪಣೆ, ಕುಳಿಚ್ಚಾಟ ನಡೆಯಿತು. ಮಾ.29ರಂದು ಬೆಳಿಗ್ಗೆ ಶ್ರೀವಿಷ್ಣುಮೂರ್ತಿ ದೈವದ ಬಯಲು ಕೋಲ, ಪ್ರಸಾದ ಸ್ವೀಕಾರ, ಅನ್ನಪ್ರಸಾದ, ಬಳಿಕ ಗುಳಿಗ ದೈವದ ಕೋಲ ನಡೆಯಿತು. ಅರಿಪ್ಪಳ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಹಾಗೂ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here