ಅಪಾಯಕಾರಿ ಸ್ಥಿತಿಯಲ್ಲಿ ಪಂಜಳ ಪರ್ಪುಂಜ ಅಜ್ಜಿಕಟ್ಟೆ ಮಸೀದಿ ತಿರುವು ರಸ್ತೆ-ಸುಗಮ ಸಂಚಾರಕ್ಕೆ ಸ್ಥಳೀಯರಿಂದ ಶಾಸಕರಿಗೆ ಮನವಿ

0

ಪುತ್ತೂರು: ಪಂಜಳ ಪರ್ಪುಂಜ ರಸ್ತೆಯ ಅಜ್ಜಿಕಟ್ಟೆ ಮಸೀದಿ ತಿರುವು  ರಸ್ತೆಯಲ್ಲಿ ಹಲವಾರು ಅಪಘಾತ ಅನಾಹುತಗಳು ಸಂಭವಿಸುತ್ತಿವೆ.ರಸ್ತೆಯ ತಿರುವು ಮುಂದೆ ಬರುವಂತಹ ವಾಹನಗಳಿಗೆ ಕಾಣುವುದಿಲ್ಲ.

ಮದ್ರಸದ ಸುಮಾರು 200 ಮಕ್ಕಳು ರಾತ್ರಿ ಹಗಲು ಇದೇ ರಸ್ತೆಯಲ್ಲಿ  ಹೋಗುತ್ತಿದ್ದು ಈ ತಿರುವು ತುಂಬಾ ಅಪಾಯಕಾರಿಯಾಗಿದ್ದು ತಿರುವನ್ನು ಅಗಲಗೊಳಿಸಿ ಮಕ್ಕಳ ಮತ್ತು ಸಾರ್ವಜನಿಕರಿಗೆ ಪ್ರಾಣಕ್ಕೆ ಕುತ್ತು ಬಾರದಿರಲಿ ಎಂದು ಊರವರು ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಯಾಕೂಬ್ ಸಾಹೇಬ್, ಮುಸ್ತಫಾ ಅಜ್ಜಿಕಟ್ಟೆ, ಕುರಿಯ  ಬೂತ್ ಅಧ್ಯಕ್ಷರಾದ ಎ.ಆರ್ ಆಸಿಫ್, ರಫೀಕ್ ಅಜ್ಜಿಕಟ್ಟೆ, ನಿಝಾರ್ ಅಜ್ಜಿಕಟ್ಟೆ ಸಹಿತ ಊರಿನ ಹಲವಾರು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here