![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪ್ಲಾಸ್ಟಿಕ್ ಬಳಕೆ ಪರಿಶೀಲನೆ ಕುರಿತು ವಿವಿಧ ವಾಣಿಜ್ಯ ಮಳಿಗೆಗಳಿಗೆ ನಗರಸಭೆ ಇಂದು ದಾಳಿ ಮಾಡಿದೆ. ಎ ಸಿ ಸೂಚನೆ ಮೇರೆಗೆ ಈ ದಾಳಿ ನಡೆದಿದೆ.
ಕೋರ್ಟ್ ರೋಡ್, ಮುಖ್ಯ ರಸ್ತೆ ಹಾಗೂ ದರ್ಬೆಯ ಕೆಲವು ಅಂಗಡಿ ಮಳಿಗೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಅಂಗಡಿ ಮಳಿಗೆಗಳಿಂದ ಸುಮಾರು 40 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
![](https://puttur.suddinews.com/wp-content/uploads/2024/05/a44ef3cd-a10c-4e94-9272-1b68fc8bd4da.jpg)
ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಕಂದಾಯ ಅಧಿಕಾರಿ ಪಕೀರ ಮೂಲ್ಯ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಕಂದಾಯ ವಿಭಾಗದ ಸಿಬ್ಬಂದಿ ಪುರುಷೋತ್ತಮ್ ಹಾಗೂ ಸ್ವಚ್ಛತಾ ಮೇಲ್ವಿಚಾರಕ ಐತಪ್ಪ, ನಾಗೇಶ್ ದಾಳಿಯಲ್ಲಿ ಭಾಗವಹಿಸಿದರು.
![](https://puttur.suddinews.com/wp-content/uploads/2024/05/7b2ef55f-5f25-4b46-99cf-aedcc625b65f.jpg)