ಕ್ಯಾ.ಬ್ರೀಜೇಶ್ ಚೌಟ ಗೆಲುವು ತ್ಯಾಗರಾಜನಗರದಲ್ಲಿ ಸಂಭ್ರಮಾಚರಣೆ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರೀಜೇಶ್ ಚೌಟರವರ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಅರಿಯಡ್ಕ ಗ್ರಾಪಂ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ತ್ಯಾಗರಾಜನಗರ ಬಸ್ಸು ನಿಲ್ದಾಣದ ಬಳಿ ಪ್ರಧಾನಿ ಮೋದಿಯವರ ಕಟೌಟ್ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಪಂ ಸದಸ್ಯ ರಾಜೇಶ್ ಮಣಿಯಾಣಿ, ಬೂತ್ ಅಧ್ಯಕ್ಷ ಶಿವರಾಮ ಪಾಟಾಳಿ, ಚಂದ್ರಶೇಖರ್ ರೈ, ನವೀನ್, ಹೃತೀಕ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here