ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿಗಳಿಗೆ ಮನೋವಿಶ್ಲೇಷಣಾ ಕಾರ್ಯಾಗಾರ 

0

ಸವಣೂರು: ಸವಣೂರಿನ ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಮತ್ತು ಮಾನಸಿಕ ಗೊಂದಲಗಳ ನಿವಾರಣೆಗಾಗಿ ಮನೋವಿಶ್ಲೇಷಣಾ ಕಾರ್ಯಾಗಾರ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಕಾರ್ಯಾಗಾರದ ಉಪಯುಕ್ತತೆಗಳ ಬಗ್ಗೆ ಮನದಟ್ಟು ಮಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪುರುಷರಕಟ್ಟೆಯ ಪ್ರಸಾದಿನೀ ಆಯುರ್ವೇದ ಕ್ಲಿನಿಕ್ ನ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಗಾರಡ್ಕ ,ಮನೋವಿಶ್ಲೇಷಣಾ ತಜ್ಞೆ ‘ನೆಮ್ಮದಿ’ ಮನೋಚಿಕಿತ್ಸಾ ಕೇಂದ್ರದಶ್ರದ್ದಾ ರೈಯವರು ಆಗಮಿಸಿದ್ದರು. 

ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ,ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎನ್ ಆಳ್ವ ವಂದಿಸಿದರು.

LEAVE A REPLY

Please enter your comment!
Please enter your name here