ಪುತ್ತೂರು ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಅಸೋಸಿಯೇಶನ್‌ಗೆ ಆಯ್ಕೆ

0

ಅಧ್ಯಕ್ಷ: ರಾಜೇಶ್ ಶ್ರೀಮಾತಾ , ಕಾರ್ಯದರ್ಶಿ: ಸುರೇಶ್ ಶ್ರೀಶಾಂತಿ


ಪುತ್ತೂರು: ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಅಸೊಸಿಯೇಶನ್ ಪುತ್ತೂರು ಇದರ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಜೂ.11 ರಂದು ನಡೆಯಿತು. ಗೌರವಾಧ್ಯಕ್ಷರುಗಳಾಗಿ ಅರುಣ್ ಕುಮಾರ್, ಅರುಣ್ ಆರ್ಟ್ಸ್ ಮತ್ತು ಹರೀಶ್ ಮೊಟ್ಟೆತ್ತಡ್ಕ , ಅಧ್ಯಕ್ಷರಾಗಿ ರಾಜೇಶ್ (ಶ್ರೀಮಾತಾ ಗ್ರಾಫಿಕ್ಸ್, ನೆಹರುನಗರ), ಉಪಾಧ್ಯಕ್ಷರಾಗಿ ವಿಘ್ನೇಶ್ (ಭಾವನಾ ಕಲಾ ಆರ್ಟ್ಸ್) ಮತ್ತು ರೀವನ್ (ರೋಬರ್ಟ್ ಆರ್ಟ್ಸ್), ಕಾರ್ಯದರ್ಶಿಯಾಗಿ ಸುರೇಶ್ ಶ್ರೀಶಾಂತಿ (ಶ್ರೀಶಾಂತಿ ಡಿಜಿಟಲ್ಸ್, ಬೊಳ್ವಾರು), ಕೋಶಾಧಿಕಾರಿಯಾಗಿ ಗಣೇಶ್ ( ಗಣೇಶ್ ಡಿಜಿಟಲ್ಸ್, ಬೊಳ್ವಾರು), ಸಂಘಟನಾ ಕಾರ್ಯದರ್ಶಿಯಾಗಿ ಪ್ರಸಾದ್ ಕೊಯಿಲರವರುಗಳನ್ನು ಆಯ್ಕೆ ಮಾಡಲಾಯಿತು. ನಾಗ್ ಆರ್ಟ್ಸ್ ನ ನಾಗಪ್ಪ ಸ್ವಾಗತಿಸಿ, ಅರುಣ್ ಆರ್ಟ್ಸ್ ನ ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ನಿರ್ಗಮಿತ ಆಧ್ಯಕ್ಷರಾದ ಗಿರೀಶ್ ಮತ್ತು ನೂತನ ಅಧ್ಯಕ್ಷರಾದ ರಾಜೇಶ್‌ರವರು ಸಂಘದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಶೇಖರ್ ಮೊಟ್ಟೆತ್ತಡ್ಕ, ವಿಘ್ನೇಶ್ ಭಾವನ, ಇಮ್ತಿಯಾಝ್ ಚಾಂದ್, ತಾರಾ ಆರ್ಟ್ಸ್ ನ ತಾರಾನಾಥ, ರಾಜೇಶ್ ಸೀಮಾ ಆರ್ಟ್ಸ್, ಚಂದ್ರ ಕುಂಬ್ರ ಉದಯ ಆರ್ಟ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here