![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಡಿಸ್ಟ್ರಿಕ್ ಬೆಸ್ಟ್ ಪ್ರಿನ್ಸಿಪಾಲ್ ಪ್ರಶಸ್ತಿಗೆ ಭಾಜನರಾದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಯವರನ್ನು ಶಾಲಾ ಶಿಕ್ಷಕ -ರಕ್ಷಕ ಸಂಘದಿಂದ ಸನ್ಮಾನಿಸಲಾಯಿತು.
ಶಿಕ್ಷಕ -ರಕ್ಷಕ ಸಂಘದ ಸದಸ್ಯರು ಮತ್ತು ಉದ್ಯಮಿಯಾದಂತಹ ರವೀಂದ್ರ ಪೈ ಇವರ ನೇತೃತ್ವದಲ್ಲಿ ಜೂ.28ರಂದು ಸತೀಶ್ ಕುಮಾರ್ ರವರ ಕೊಠಡಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಸಂಘದ ಸದಸ್ಯರು ಹಾಜರಿದ್ದರು.
![](https://puttur.suddinews.com/wp-content/uploads/2024/06/Untitled-6-10.jpg)