ಒಡಿಯೂರು ಶ್ರೀ ಜನ್ಮಾದಿನೋತ್ಸವ ಸಲುವಾಗಿ ಗ್ರಾಮೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ

0

ಪುತ್ತೂರು: ಓಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತವಾಗಿ ನಡೆಯುವಂತಹ ಗ್ರಾಮೋತ್ಸವದ ಕಾರ್ಯಕ್ರಮಕ್ಕೆ ಜೂ.29ರಂದು ಅದ್ಧೂರಿ ಚಾಲನೆ ನೀಡಲಾಯಿತು.

ಶ್ರೀ ಗುರುದೇವಾ ಸೇವಾ ಬಳಗ ಪುತ್ತೂರು, ಇದರ ಅಧ್ಯಕ್ಷ ಸುಧೀರ್ ನೋಂಡಾರವರ ಮನೆಯಲ್ಲಿ ಭಜನೆಯೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಸುಧೀರ್ ನೋಂಡಾರವರ ಮಾತೃಶ್ರೀ ನಾಗವೇಣಿ ನೋಂಡಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿ, ಹಾರೈಸಿದರು. ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಂಗಳೂರು ಸಹಿತ ಒಡಿಯೂರು ಶ್ರೀ ಗುರು ದೇವಾ ಬಳಗ ಇದರ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳ ಸಹಿತ ಹಲವರು ಅತಿಥಿಗಳು ಇದ್ದರು. ಆ ಬಳಿಕ
ಗ್ರಾಮವಿಕಾಸ ಯೋಜನೆಯ ಸದಸ್ಯರು ಹಾಗೂ ವಜ್ರ ಮಾತಾ ಮಹಿಳಾ ಭಜನಾ ಮಂಡಳಿ ತಂಡದಿಂದ ಭಜನಾ ಕಾರ್ಯಕ್ರಮವು ಕೂಡ ನಡೆಯಿತು.
ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ ಸ್ವಾಗತಿಸಿ , ಹರಿಣಾಕ್ಷಿ ಜೆ.ಶೆಟ್ಟಿ ನಿರೂಪಿಸಿದರು.
ಜಯಪ್ರಕಾಶ ರೈ, ಭವಾನಿ ಶಂಕರ್ ಶೆಟ್ಟಿ, ತಾರಾನಾಥ್,ಅಶೋಕ್ ರೈ ಅರ್ಪಿಣಿ ಗುತ್ತು, ನಯನಾ ರೈ ಹಾಗೂ ಸವಿತಾ ರೈ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here