ಕೂರ‌ತಂಙಳ್ ನಿಧನಕ್ಕೆ ಮಹಮ್ಮದ್ ಬಡಗನ್ನೂರು ಸಂತಾಪ

0

ಪುತ್ತೂರು: ಉಳ್ಳಾಲ ಖಾಝಿ ಖ್ಯಾತ ಮುಸ್ಲಿಂ ಧರ್ಮಗುರುಗಳಾಗಿರುವ ಕೂರ ತಂಙಳ್ ಎಂದೇ ಚಿರಪರಿಚಿತರಾಗಿರುವ ಕೂರತ್ ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರ ನಿಧನಕ್ಕೆ ಪಡುಮಲೆ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಉಳ್ಳಾಲ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಆಧ್ಯಾತ್ಮಿಕ ಪಂಡಿತರಾಗಿ ಜನರ ನೋವು ,ಸಂಕಷ್ಟಕ್ಕೆ ಆಧ್ಯಾತ್ಮಿಕ ಪರಿಹಾರ ನೀಡುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿಯ ಗುರುಗಳಾಗಿ ಬಾಳಿದ್ದರು. ಇವರ ಅಗಲುವಿಕೆ‌ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಅಲ್ಲಾಹನು ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here