ಪೆರಾಬೆ: ಕಾಲುಜಾರಿ ಕೆರೆಗೆ ಬಿದ್ದು ಮಹಿಳೆ ಮೃತ್ಯು

0

ಪೆರಾಬೆ: ಹುಲ್ಲು ತರಲೆಂದು ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಜು.8ರಂದು ಬೆಳಿಗ್ಗೆ ಕಡಬ ತಾಲೂಕು ಪೆರಾಬೆ ಗ್ರಾಮದ ಬಲಂಪೋಡಿ ಎಂಬಲ್ಲಿ ನಡೆದಿದೆ.


ಬಲಂಪೋಡಿ ನಿವಾಸಿ ಉಮೇಶ್ ರೈ ಅವರ ಪತ್ನಿ ಶಶಿಕಲಾ(58ವ.)ಮೃತಪಟ್ಟವರಾಗಿದ್ದಾರೆ. ಉಮೇಶ್ ರೈ-ಶಶಿಕಲಾ ದಂಪತಿಯ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದ್ದು ಪುತ್ರ ಕೃತನ್ ರೈ ತೆಲಂಗಾಣದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಉಮೇಶ್ ರೈ ಹಾಗೂ ಶಶಿಕಲಾ ದಂಪತಿ ಮಾತ್ರ ಮನೆಯಲ್ಲಿದ್ದು ಜು.8ರಂದು ಬೆಳಿಗ್ಗೆ 6 ಗಂಟೆಗೆ ಎದ್ದು ಎಂದಿನಂತೆ ಉಮೇಶ್ ರೈ ಅವರು ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡಲು ತೆರಳಿದ್ದು ಅವರ ಪತ್ನಿ ದನಗಳಿಗೆ ಹುಲ್ಲು ತರಲು ಕೃಷಿ ತೋಟದ ಕಡೆಗೆ ಹೋಗಿದ್ದರು. ಉಮೇಶ್ ರೈ ಅವರು ದನಗಳನ್ನು ಸ್ವಚ್ಚ ಮಾಡಿ ಮನೆಯಲ್ಲಿ ಇದ್ದು 1 ಗಂಟೆಯಾದರೂ ಪತ್ನಿ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ತೋಟದ ಬಳಿ ಹೋಗಿ ನೋಡಿದಾಗ ಎಲ್ಲಿಯೂ ಕಾಣದೇ ಇದ್ದು ಬಳಿಕ ನೆರೆಕೆರೆಯವರು ಸೇರಿ ಹುಡುಕಾಟ ಮಾಡಿದಾಗ ಅಡಿಕೆ ಕೃಷಿ ತೋಟದ ಬಳಿ ಇರುವ ಕೆರೆಯಲ್ಲಿ ಶಶಿಕಲಾ ಅವರು ಬಿದ್ದುಕೊಂಡಿದ್ದು ಮೇಲಕ್ಕೆತ್ತಿ ನೋಡಿದಾಗ ಅವರು ಮೃತಪಟ್ಟಿದ್ದರು. ಶಶಿಕಲಾ ಅವರು ತೋಟಕ್ಕೆ ಹುಲ್ಲು ತರಲು ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಶಶಿಕಲಾ ಅವರ ಪತಿ ಉಮೇಶ್ ರೈ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here