ಸವಣೂರು : ಸವಣೂರು ಶ್ರೀ ಶಾರದಾಂಬಾ ಸೇವಾ ಸಂಘದ ವತಿಯಿಂದ ಅಕ್ಟೋಬರ್ 12ರಂದು ನಡೆಯಲಿರುವ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಪೂರ್ವ ಸಿದ್ದತಾ ಸಭೆ ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,20ನೇ ವರ್ಷದ ಶ್ರೀ ಶಾರದೋತ್ಸವದ ಯಶಸ್ವಿ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.ವೇದಿಕೆಯಲ್ಲಿ ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ವಸಂತ ರೈ ಸೊರಕೆ,ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು ಉಪಸ್ಥಿತರಿದ್ದರು.
ಸಭೆಯಲ್ಲಿ ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ನಿಕಟ ಪೂರ್ವ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ ,ಉಪಾಧ್ಯಕ್ಷ ಕುಂಞ ನಲಿಕೆ,ಕೋಶಾಧಿಕಾರಿ ಎಂ.ಟಿ.ಗಿರಿಧರ ಗೌಡ ಮೆದು,ಮಾಜಿ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ, ಪದಾಧಿಕಾರಿಗಳಾದ ಚೇತನ್ ಕುಮಾರ್ ಕೋಡಿಬೈಲು, ಜಯರಾಮ ರೈ ಮೂಡಂಬೈಲು,ಶೇಖರ ಬಸ್ತಿ,ವಸಂತ ಗೌಡ ಬೆದ್ರಂಪಾಡಿ,ಸತೀಶ್ ಬಲ್ಯಾಯ ಕೆ.,ಬಾಲಚಂದ್ರ ರೈ ಕೆರೆಕ್ಕೋಡಿ, ಪ್ರವೀಣ್ ಚೆನ್ನಾವರ, ಐತ್ತಪ್ಪ ಗೌಡ ಸವಣೂರು, ಯತೀಂದ್ರ ಶೆಟ್ಟಿ ಮಠ,ರಾಮಕೃಷ್ಣ ಪ್ರಭು ಮೊದಲಾದವರಿದ್ದರು.