ಕಂಬಳಬೆಟ್ಟು ಧರ್ಮನಗರ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದಿಂದ ಸೇವಾ ನಿಧಿ ವಿತರಣೆ

0

ವಿಟ್ಲ: ಸದಾ ಒಂದಲ್ಲ ಒಂದು ಸೇವಾಯೋಜನೆಯನ್ನು ನಡೆಸಿಕೊಂಡು, ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಕಂಬಳಬೆಟ್ಟು ಧರ್ಮನಗರ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ಎಂಟನೇ ಸೇವಾಯೋಜನೆಯಾಗಿ, ಅನಾರೋಗ್ಯದಲ್ಲಿರುವ ಉರಿಮಜಲಿನ ನಿವಾಸಿ ಮೋಹಿನಿರವರಿಗೆ ಅವರ ಚಿಕಿತ್ಸೆಯ ಸಲುವಾಗಿ ಸೇವಾನಿಧಿ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಜನಾರ್ಧನ ಕಾರ್ಯಡಿ, ಸ್ಥಾಪಕಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಮೂಡೈಮಾರು, ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮೂಡೈಮಾರು, ಅಜಿತ್ ದೇವಸ್ಯ, ಕಾರ್ಯದರ್ಶಿ ಜೈದೀಪ್ ಅಮೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here