ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡ್‌ಗುತ್ತು ತರವಾಡು ಸಮೀಪದ ಗದ್ದೆಯಲ್ಲಿ ಪರಿವಾರ ಬಂಟರ ಸಂಘದಿಂದ ’ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮ

0

ಪುತ್ತೂರು: ಪರಿವಾರ ಬಂಟರ ಸಂಘದ ಪುತ್ತೂರು ವಲಯದ ವತಿಯಿಂದ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಹಭಾಗಿತ್ವದಲ್ಲಿ ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡ್‌ಗುತ್ತು ತರವಾಡಿನ ಸಮೀಪದ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಜು.14ರಂದು ಬೆಳಗ್ಗೆ ಉದ್ಘಾಟನೆಗೊಂಡಿತು.


ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ನಿರ್ದೇಶಕ ರತ್ನಾಕರ್ ನಾಯ್ಕ್ ಉದ್ಘಾಟಿಸಿ, ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಎ ಅವರು ತೆಂಗಿನ ಕಾಯಿ ಒಡೆದು ಕೆಸರ್ಡ್ ಒಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನ್ಯಾಯವಾದಿ ತೇಜಸ್ ನಾಯ್ಕ್, ಬಡಕೋಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ಎಸ್ ನಾಯ್ಕ್, ಪರಿವಾರ ಬಂಟರ ಸಂಘ ಪುತ್ತೂರು ವಲಯದ ಅಧ್ಯಕ್ಷ ಸುಧಾಕರ್ ಕೆ.ಪಿ ಅವರು ಮಾತನಾಡಿದರು. ಕೆಸರು ಗದ್ದೆಗೆ ಸ್ಥಳವಕಾಶ ನೀಡಿದ ಶಶಿಧರ್ ನಾಯ್ಕ್, ಸಂಘದ ಉಪಾಧ್ಯಕ್ಷ ಶಿವಾನಂದ ನಾಯ್ಕ್, ಮಹಿಳಾ ವೇದಿಕೆ ಅಧ್ಯಕ್ಷೆ ಶಕೀಲಾ ಡಿ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಸ್ಕರ್, ಸುಪ್ರಭ, ನಿರೋಶ್, ನಿತೇಶ್, ಪ್ರವೀಣ್, ವೀಕ್ಷಿತ್, ಸರ್ವೇಶ್, ರಶ್ಮಿ, ಸುನಿಲ್, ಜಯರಾಜ್ ಅತಿಥಿಗಳನ್ನು ಗೌರವಿಸಿದರು. ಯಶ್ವಿ ಉಮಾಶಂಕರ್ ಪ್ರಾರ್ಥಿಸಿದರು. ಯುವ ಪರಿವಾರ ಬಂಟರ ಸಮಿತಿ ಅಧ್ಯಕ್ಷ ಅಭಿಜಿತ್ ನಾಯ್ಕ್ ಕೊಳಕ್ಕಿಮಾರ್ ಸ್ವಾಗತಿಸಿ, ಪರಿವಾರ ಬಂಟರ ಸಂಘದ ಕಾರ್ಯದರ್ಶಿ ಕವನ್ ನಾಯ್ಕ್ ವಂದಿಸಿದರು. ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here