ಪುತ್ತೂರು: ಓಮ್ನಿ ಚಾಲಕ ಶಿವಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಪುತ್ತೂರು ಸಾಮೆತ್ತಡ್ಕ 2ನೇ ಕ್ರಾಸ್ ನಿವಾಸಿ ಓಮ್ನಿ ಚಾಲಕ ಶಿವಪ್ರಸಾದ್(39ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.15ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.


ಸಾಮೆತ್ತಡ್ಕ ದಿ.ಗಣೇಶ್ ರಾವ್ ಅವರ ಪುತ್ರರಾಗಿದ್ದ ಅವಿವಾಹಿತ ಶಿವಪ್ರಸಾದ್ ಅವರು ಮಾರುತಿ ಓಮ್ನಿಯಲ್ಲಿ ಶಾಲಾ ಮಕ್ಕಳನ್ನು ಟ್ರಿಪ್ ಮಾಡುತ್ತಿದ್ದರು. ಜು.14ರಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಅವರು ನೇಣು ಬಿಗಿದು ಆತ್ಮಹತ್ಯೆ ಕೊಂಡ ಸ್ಥಿತಿ ಕಂಡು ಬಂದಿದೆ. ಮೃತರು ತಾಯಿ ಶಕು ಜಿ ರಾವ್, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ನಗರಸಭೆ ಸ್ಥಳಿಯ ಸದಸ್ಯ ಮನೋಹರ್ ಕಲ್ಲಾರೆ ಸಹಿತ ಕಲ್ಲಾರೆಯ ಯುವಕ ವೃಂದದವರು ಮೃತ ಶಿವಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here