ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಪುಣಚ, ವಿಟ್ಲಮುಡ್ನೂರಿನ ಯೋಧರಿಬ್ಬರಿಗೆ ಬಿಜೆಪಿ ಪುಣಚ ಮಹಾಶಕ್ತಿಕೇಂದ್ರದಿಂದ ಗೌರವ ಸನ್ಮಾನ

0

ಪುತ್ತೂರು: ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಯೋಧರಾದ ಪುಣಚ ಗ್ರಾಮದ ಆಜೇರುಮಜಲು ನಿವಾಸಿಯಾಗಿರುವ ವೆಂಕಪ್ಪ ಗೌಡರನ್ನು ಮತ್ತು ವಿಟ್ಲ ಮುಡ್ನೂರು ಗ್ರಾಮದ ಹಡೀಲು ನಿವಾಸಿಯಾಗಿರುವ ಸೇಶಪ್ಪ ಗೌಡರನ್ನು ಬಿಜೆಪಿ ಪುಣಚ ಮಹಾಶಕ್ತೀ ಕೇಂದ್ರದ ವತಿಯಿಂದ ಅವರ ನಿವಾಸಕ್ಕೆ ತೆರಳಿ ಗೌರವಿಸಿ ಸನ್ಮಾನಿಸಲಾಯಿತು.

ಪುಣಚ ಮಹಾಶಕ್ತೀ ಕೇಂದ್ರ ಅಧ್ಯಕ್ಷರಾಗಿರುವ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರ.ಕಾರ್ಯದರ್ಶೀ ದಯಾನಂದ ಶೆಟ್ಟಿ ಉಜ್ರೇಮಾರ್, ಬಿಜೆಪಿ ರೈತಮೋರ್ಚ ಪ್ರ.ಕಾರ್ಯದರ್ಶೀ ಹಾಗೂ ವಿ.ಮುಡ್ನೂರು ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರ್, ಜಿಲ್ಲಾ ಒ.ಬಿ.ಸಿ ಮೋರ್ಚ ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ಮಹಾಶಕ್ತೀ ಕೇಂದ್ರ ಸದಸ್ಯ ಹರೀಶ್ ಪುಣಚ, ವಿ.ಮುಡ್ನೂರು ಮತ್ತು ಪುಣಚ 1 ಶಕ್ತೀ ಕೇಂದ್ರ ಸದಸ್ಯರುಗಳಾದ ಗೋವಿಂದರಾಜ್ ಭಟ್ ಮತ್ತು ಹರೀಶ್ ಭಟ್, ವಿ.ಮುಡ್ನೂರು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಪಕ್ಷದ ಸ್ಥಳೀಯ ಮುಖಂಡರಾದ ಹರೀಶ್ ಪೂಜಾರಿ, ಗಿರೀಶ್ ಹಡೀಲು, ಬೂತ್ ಕಾರ್ಯದರ್ಶಿ ದಿನೇಶ್ ನಾಯ್ಕ್, ಪ್ರೇಮಲತಾ ಸೇಶಪ್ಪಗೌಡ, ಜ್ಯೋತಿ ವೆಂಕಪ್ಪಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here