ಕುಂಬ್ರ ಬಿಎಂಎಸ್ ಕುಂಬ್ರ ವಲಯ ಕಛೇರಿಯಲ್ಲಿ ಸಂಸ್ಥಾಪಕರ ದಿನಾಚರಣೆ

0

ಪುತ್ತೂರು: ಬಿ.ಎಂ.ಎಸ್ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಮಾಜ್ದೂರ್ ಸಂಘದ ಕುಂಬ್ರ ವಲಯ ಕಛೇರಿಯಲ್ಲಿ 70ನೇ ಸಂಸ್ಥಾಪನಾ ದಿನಾಚರಣೆಯನ್ನು ಜು.28ರಂದು ಆಚರಿಸಲಾಯಿತು. ಭಾರತಮಾತೆಯ ಮತ್ತು ದಿ. ದತ್ತೋಪಂತ್ ಠೇಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂಸ್ಥಾಪಕರ ಬಗ್ಗೆ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ರವರು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷರಾದ ಪುರಂದರ ಶೆಟ್ಟಿ ಮುಡಾಲರವರು ಕಾರ್ಮಿಕರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳು ಸೇರಿದಂತೆ ಇತರ ಮಾಹಿತಿ ನೀಡಿದರು.
ಸಭೆಯಲ್ಲಿ ರಾಜೇಶ್ ರೈ ಪರ್ಪುಂಜ, ಎಸ್ ಮಾಧವ ರೈ ಕುಂಬ್ರ, ಹರೀಶ್ ಆಚಾರ್ಯ ಕೊಯಿಲತಡ್ಕ, ಶೇಖರ ರೈ ಕುರಿಕ್ಕಾರ, ಸಂತೋಷ್ ರೈ ಕೊಡೆಂಚಾರ್, ದಿವಾಕರ ಕುಲಾಲ್, ಕೇಶವ ಈಶ್ವರಮಂಗಲ, ಪ್ರಮಿತಾ ಕೊಡಿಬೈಲು, ಜನಾರ್ಧನ ತಿಂಗಳಾಡಿ, ಗಿರೀಶ ನಾಯ್ಕ್, ಉದಯ ಮಡಿವಾಳ ಕುಂಬ್ರ, ಮಂಜುನಾಥ ನಾಯ್ಕ್ ಸೇರಿದಂತೆ ಈಶ್ವರಮಂಗಲ ಮತ್ತು ಪಾಣಾಜೆ ವಲಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ದಿವಾಕರ ಆಚಾರ್ಯ ಕೈಕಾರ ಸ್ವಾಗತಿಸಿ, ಜಯಂತ ಮುಡಾಲ ವಂದಿಸಿದರು.

LEAVE A REPLY

Please enter your comment!
Please enter your name here