ಕುರಿಯ: ಶಿಥಿಲಗೊಂಡಿದ್ದ ಪ್ರಯಾಣಿಕರ ತಂಗುದಾಣವನ್ನು ದುರಸ್ಥಿಗೊಳಿಸಿದ ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ

0

ಪುತ್ತೂರು: ಕುರಿಯ ಗ್ರಾಮದ ಕುರಿಯ ಕೃಷಿ ಪತ್ತಿನ ಸಹಕಾರ ಸಂಘದ ಶಾಖಾ ಕಛೇರಿ ಬಳಿಯಲ್ಲಿ ಶಿಥಿಲಗೊಂಡಿದ್ದ ಪ್ರಯಾಣಿಕರ ತಂಗುದಾಣವನ್ನು ಆರ್ಯಾಪು ಗ್ರಾ. ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಸ್ವಂತ ವೆಚ್ಚ ಭರಿಸಿ ದುರಸ್ಥಿಪಡಿಸಿರುತ್ತಾರೆ.

ಕುರಿಯದಲ್ಲಿ ತಂಗುದಾಣವು ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು. ಅಲ್ಲದೆ ಸುತ್ತ ಮುತ್ತ ಪೊದೆಗಳು ತುಂಬಿಕೊಂಡಿದ್ದ ಜನರಿಗೆ ಪ್ರಯಾಣಿಕರಿಗೆ ನಿಲ್ಲಲು ಆಯೋಗ್ಯವಾಗಿತ್ತು. ಹೀಗಾಗಿ ತಂಗುದಾಣ ಇದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿತ್ತು. ಇದನ್ನು ಮನಗಂಡ ಪುರುಷೋತ್ತಮ ರೈ ಅವರು ತನ್ನ ಸ್ವಂತ ಖರ್ಚಿನಲ್ಲಿ ತಂಗುದಾಣ ಛಾವಣಿ ದುರಸ್ಥಿ ಮಾಡಿ, ಸುಣ್ಣ ಬಣ್ಣ ಬಳಿದು ಅಂದಗೊಳಿಸಿದ್ದಾರೆ. ಸುತ್ತ ತುಂಬಿಕೊಂಡಿದ್ದ ಪೊದೆಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಂಗುದಾಣದಲ್ಲಿ ನಿಲ್ಲುವಂತೆ ಮಾಡಿಕೊಟ್ಟಿದ್ದು ಪುರುಷೋತ್ತಮ ರೈ ಸಾಮಾಜಿಕ ಕಾಲಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here