ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಮನೋಜ್ ಕೋಡಿಂಬಾಳ ಆಯ್ಕೆ

0

ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ದ.ಕ.ಜಿಲ್ಲಾಧ್ಯಕ್ಷರಾಗಿ ಮನೋಜ್ ಕೋಡಿಂಬಾಳ ನೇಮಕಗೊಂಡಿದ್ದಾರೆ.


ಆ.7ರಂದು ಮಂಗಳೂರಿನಲ್ಲಿ ನಡೆದ ಕೆ.ಎಸ್.ಎಮ್.ಸಿ.ಎ ಸಭೆಯಲ್ಲಿ ರಾಜ್ಯಾಧ್ಯಕ್ಷ ಎ.ಸಿ.ಜಯರಾಜ್ ಅವರು ನೇಮಕಗೊಳಿಸಿದ್ದಾರೆ.


ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ಇಂಟರ್ ಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿಯ ವಲಯಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಘಟಕ ಅಧ್ಯಕ್ಷ ಕ್ಸೇವಿಯರ್ ಬೇಬಿ, ಪ್ರ.ಕಾರ್ಯದರ್ಶಿ ಜೊಮೊನ್ ಎಂ.ಜೆ. ಉಪಾಧ್ಯಕ್ಷ ತೋಮಸ್ ಇಡಯಾಲ್, ಜತೆ ಕಾರ್ಯದರ್ಶಿ ಬಿನೋಯ್ ಮ್ಯಾತ್ಯೂ, ಮಂಗಳೂರು ಘಟಕದ ಅಧ್ಯಕ್ಷ ಸಾಬು ಉರುಂಬಿಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here