ಕುಂಬ್ರ ವರ್ತಕರ ಸಂಘದಿಂದ ಸ್ವಾತಂತ್ರ್ಯೋತ್ಸವ, ಮೆಸ್ಕಾಂ ಪವರ್‌ಮ್ಯಾನ್‌ಗಳಿಗೆ ಸನ್ಮಾನ

0

ಪುತ್ತೂರು: ಕುಂಬ್ರ ವರ್ತಕರ ಸಂಘದ ವತಿಯಿಂದ 78ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪ ವಿಭಾಗದ ಕುಂಬ್ರ ವಲಯದ ಜೆಇ ಹಾಗೂ ಪವರ್‌ಮ್ಯಾನ್‌ಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಕುಂಬ್ರ ಮೆಸ್ಕಾಂ ಕಛೇರಿ ಆವರಣದಲ್ಲಿ ನಡೆಯಿತು. ಮೆಸ್ಕಾಂ ಕಛೇರಿಯಲ್ಲಿ ನಡೆದ ಸ್ವಾತಂತ್ರೋತ್ಸವದ ಆಚರಣೆಯ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶಂಕರ್ ಸಿ.ಎಚ್.ರವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕಿರಿಯ ಅಭಿಯಂತರರಾದ ರವೀಂದ್ರ ಎಂ. ಪವರ್‌ಮ್ಯಾನ್‌ಗಳಾದ ಗಣೇಶ್ ವೈ, ಚಂದ್ರಶೇಖರ ಬಿ.ಜಿ, ಮಿಥುನ್ ಲಮಾಣಿ, ಶ್ರೀನಾಥ್ ದೊಡಮನಿ, ಶರಣಪ್ಪ ಎಂ.ಛಲವಾದಿ, ಕಿರಣ ಎ.ಬಿ, ಪ್ರದೀಪ್ ಕಟ್ಟಿಮನಿ, ಚೈತನ್ ಬನ್ನಿಕೊಪ್ಪ, ಮೋನಪ್ಪ ಕುಂಬ್ರ, ದೇವೇಂದ್ರ ಕಟ್ಟಿಮನಿ, ತೀರ್ಥರಾಜ್, ಜಗದೀಶರವರುಗಳನ್ನು ಶಾಲು,ಹಾರ, ಸ್ಮರಣಿಕೆ ಕೊಟ್ಟು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಜೆಇ ರವೀಂದ್ರ ಎಂ ಹಾಗೂ ಪವರ್‌ಮ್ಯಾನ್ ಪ್ರದೀಪ್‌ರವರುಗಳ ಸಂದರ್ಭೋಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸುವ ಮೂಲಕ ಎಲ್ಲರ ಸಹಕಾರ ಕೋರಿದರು. ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ರಫೀಕ್ ಅಲ್‌ರಾಯ ಸ್ವಾತಂತ್ರ್ಯೋತ್ಸವ ಸಂದೇಶ ಸಾರಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ,ಎಸ್.ಮಾಧವ ರೈ ಕುಂಬ್ರ, ದಿವಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಚರಿತ್ ಕುಮಾರ್, ಹನೀಫ್, ಸುರೇಶ್ ಕುಮಾರ್ ತಿಂಗಳಾಡಿ, ಪದ್ಮನಾಭ ಆಚಾರ್ಯ, ವಿಶ್ವನಾಥ ರೈ, ಉಸ್ಮಾನ್ ಮುಸ್ಲೀಯಾರ್, ಜಯರಾಮ ಆಚಾರ್ಯ, ಮೆಸ್ಕಾಂ ಬೆಟ್ಟಂಪಾಡಿ ಜೆಇ ಪುತ್ತು, ಈಶ್ವರಮಂಗಲ ಜೆಇ ರಮೇಶ್, ಕುಂಬ್ರ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್, ಕಿರಿಯ ಇಂಜಿನಿಯರ್ ಉಷಾ ಮತ್ತು ಸುಂದರಿ, ಸಿಬ್ಬಂದಿಗಳಾದ ಶಿಲ್ಪಾ, ಹರಿಣಿ, ಜಯಪ್ರಕಾಶ್, ಧನಲಕ್ಷ್ಮೀ, ಶ್ವೇತಾ, ಪ್ರಶಾಂತ್, ಮಂಜಪ್ಪ, ಮಳಿಯಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
‘ನಿಮ್ಮೆಲ್ಲರ ಸಹಕಾರವೇ ನಮಗೆ ದೊಡ್ಡ ಸನ್ಮಾನ, ಪವರ್‌ಮ್ಯಾನ್‌ಗಳು ಫೋನ್ ಕಾಲ್ ತೆಗೆಯುವುದಿಲ್ಲ ಎಂಬ ಆರೋಪವೇ ಜಾಸ್ತಿ, ಕಂಬದಲ್ಲಿರುವಾಗ ಕಾಲ್ ತೆಗೆಯಬೇಡಿ ಎಂದು ಜೆಇ ಹೇಳಿರುತ್ತಾರೆ. ಮಳೆ,ಗಾಳಿ,ರಾತ್ರಿ,ಹಗಲೆನ್ನದೆ ಜೀವದ ಹಂಗು ತೊರೆದು ಕೆಲಸ ಮಾಡುತ್ತೇವೆ. ನಿಮ್ಮ ಪ್ರೀತಿಯೇ ನಮಗೆ ರಕ್ಷೆ. ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಪ್ರೀತಿ, ಸಹಕಾರ ಕೊಡಿ.’

LEAVE A REPLY

Please enter your comment!
Please enter your name here