ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು:ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಹತ್ ಕಮಿಟಿ ಅಧ್ಯಕ್ಷ ಬಶೀರ್ ಹಾಜಿ ಎ.ಕೆ. ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಮ್ಮಾಯಿ ಬದ್ರಿಯಾ ದರ್ಸ್ ಮುದರ್ರಿಸ್ ಮುಈನುದ್ದೀನ್ ಮದನಿ, ಕೆಮ್ಮಾಯಿ ಜುಮ್ಮಾ ಮಸೀದಿಯ ಸದರ್ ಮುಅಲ್ಲಿಂ ಅಬ್ದುಲ್ ಜಲೀಲ್ ಝೈನಿ ಕೋಲ್ಪೆ ರವರು ಮಾತನಾಡಿ.ಸ್ವತಂತ್ರ ಭಾರತದ ಭವ್ಯ ಚರಿತ್ರೆಯ ಕುರಿತು ವಿವರಿಸಿದರು. ಕೆಮ್ಮಾಯಿ ಮಂಬವುಲ್ ಉಲೂಂ ಮದ್ರಸ ಹಾಗು ಬದ್ರಿಯಾ ದರ್ಸ್ ಇದರ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಪದಾಧಿಕಾರಿಗಳಾದ ಹಸನ್ ಹಾಜಿ, ಹಕೀಂ ಡಿ.ಕೆ, ಅಬ್ದುಲ್ ಖಾದರ್ ಮೋನಾಕ, ಹಾಗು ಜಮಾಅತ್ ನ ಪ್ರಮುಖರು ಉಪಸ್ಥಿತರಿದ್ದರು. ಮುಅಲ್ಲಿಂ ಇಸ್ಮಾಯಿಲ್ ಮುಸ್ಲಿಯಾರ್ ಮುಕ್ವೆ ಸ್ವಾಗತಿಸಿದರು.
ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here