ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ 

0

ಪುತ್ತೂರು:ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಧ್ವಜಾರೋಹಣವನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ  ಸುಜಾತಸಂತೋಷ್ ರೈ ಕುಂಬ್ರ ರವರು ನೆರವೇರಿಸಿದರು, ನಿವೃತ್ತ ಮುಖ್ಯಗುರುಗಳಾದ  ಸುಧಾಕರ ರೈ ಕುಂಬ್ರರವರು ಸ್ವಾತಂತ್ರ್ಯ ದಿನದ ಬಗ್ಗೆ  ಮಾಹಿತಿ ನೀಡಿ ಶುಭಹಾರೈಸಿದರು,

ಕೆ ಪಿ ಎಸ್ ಶಾಲಾ ಪ್ರಭಾರ ಮುಖ್ಯ ಗುರುಗಳಾದ  ಜೂಲಿಯಾನ ಮೊರಸ್ ಹಾಗೂ ದೈಹಿಕ ಶಿಕ್ಷಕಿ ಶ ಚಂದ್ರಕಲಾರವರು ಸಹಕರಿಸಿದರು, ಸಂತೋಷ್ ರೈ ಕುಂಬ್ರ,   ಉಮೇಶ್ ಬರೆಮೇಲು, ಮಕ್ಕಳ ಪೋಷಕರು,  ಸ್ತ್ರೀ ಶಕ್ತಿ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು, ಹಾಗೂ ಪುಟಾಣಿ ಮಕ್ಕಳು, ಉಪಸ್ಥಿತರಿದ್ದರು, ಪುಟಾಣಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳೊಂದಿಗೆ ರಂಜಿಸಿದರು, ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಸ್ವಾಗತಿಸಿದರು  ಸಹಾಯಕಿ ರಾಜೀವಿ  ವಂದಿಸಿದರು, ವರ್ತಕರ ಸಂಘ  ಕುಂಬ್ರ,  ಆಶಾಮಾಧವ ರೈ  ಕುಂಬ್ರ,  ಚಿತ್ರಪ್ರಕಾಶ್ ಉಜಿರೋಡಿ, ಸುಜಾತಸಂತೋಷ್ ರೈ ಕುಂಬ್ರ, ಅನೀಶಾರಶೀದ್ ಕುಂಬ್ರರವರು ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡಿದರು.

LEAVE A REPLY

Please enter your comment!
Please enter your name here