ಕೊಳ್ತಿಗೆ: ಅಜಾಗರೂಕತೆಯಿಂದ ರಿಕ್ಷಾ ಚಾಲನೆ-ಪ್ರಶ್ನಿಸಿದಾತನಿಗೆ ಹಲ್ಲೆ-ದೂರು ದಾಖಲು

0

ಪುತ್ತೂರು:ಅಜಾಗರೂಕತೆಯಿಂದ ರಿಕ್ಷಾ ಚಲಾಯಿಸಿದ್ದನ್ನು ಪ್ರಶ್ನಿಸಿದ ಬೈಕ್‌ ಸವಾರನಿಗೆ ಹಲ್ಲೆ ನಡೆಸಿದ ರಿಕ್ಷಾ ಚಾಲಕನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ತಿಗೆ ಗ್ರಾಮದ ಬೈಕ್‌ ಸವಾರ ಮೋಹನ್‌(28.ವ) ಪಟ್ಲ ಎಂಬಲ್ಲಿ ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಮನೋಜ್‌ ಎಂಬಾತ ಅಜಾಗರೂಕತೆಯಿಂದ ಬೈಕ್‌ ಢಿಕ್ಕಿ ಹೊಡೆಯುವ ರೀತಿಯಲ್ಲಿ ರಿಕ್ಷಾ ಚಲಾಯಿಸಿದ್ದಾನೆ.ಆ.18ರಂದು ರಾತ್ರಿ ಕೊಳ್ತಿಗೆ ಗ್ರಾಮದ ಅಂಬೇಡ್ಕರ್ ಭವನದ ಬಳಿ ಈ ಘಟನೆ ನಡೆದಿದ್ದು,ಬೈಕ್‌ ಸವಾರ ಅಜಾಗರೂಕತೆ ಚಾಲನೆ ಬಗ್ಗೆ ರಿಕ್ಷಾ ಚಾಲಕನಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರಿಕ್ಷಾ ಚಾಲಕ ಮೋಹನ್‌ ಗೆ ಅವಾಚ್ಯ ಪದಗಳಿಂದ ನಿಂದಿಸಿ ಮಂಜುನಾಥ ಮತ್ತು ಮಮತಾ ಎಂಬವರೊಂದಿಗೆ ಸೇರಿ ಹಲ್ಲೆ ನಡೆಸಿರುತ್ತಾರೆ. ಇದೇ ವೇಳೆ ಸ್ಥಳದಲ್ಲಿದ್ದ ವಸಂತ, ವಿನಯ ಮತ್ತು ಭರತ್ ಗಲಾಟೆ ಮತ್ತು ಹಲ್ಲೆ ನಡೆಸುವುದನ್ನು ತಡೆದಿದ್ದಾರೆ ಎಂದು ಮೋಹನ್‌ ನೀಡಿದ ದೂರಿನಲ್ಲಿ ಹೇಳಲಾಗಿದೆ. ಹಲ್ಲೆಯಿಂದ ಗಾಯಗೊಂಡ ಮೋಹನ್‌ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 70/2024 ಕಲಂ: ಬಿಎನ್ಎಸ್ . 352, 118(1), 115(2), 3(5) ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here