ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಗೆ ದಾನಿಯಿಂದ ಕಲರ್ ಪ್ರಿಂಟರ್ ಕೊಡುಗೆ

0

ಉಪ್ಪಿನಂಗಡಿ:ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಉದ್ಯಮಿ ಮತ್ತು ಪ್ರಗತಿಪರ ಕೃಷಿಕ ಪದ್ಮನಾಭ ಶೆಟ್ಟಿ ಮತ್ತು ಅವರ ಧರ್ಮಪತ್ನಿ ನಂದನಾ ಪಿ ಶೆಟ್ಟಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರು ಕಲರ್ ಪ್ರಿಂಟರನ್ನು ಕೊಡುಗೆಯಾಗಿ ನೀಡಿದರು.

ಈ ಕೊಡುಗೆಯನ್ನು ಅವರ ಮಕ್ಕಳಾದ ಆಯುಷ್ ಮತ್ತು ಧಾತ್ರಿ ಲಕ್ಷ್ಮಿ ಶೆಟ್ಟಿ ಹಸ್ತಾಂತರಿಸಿದರು. ದಕ್ಷಿಣ ಕನ್ನಡ ಎಸ್‌.ಡಿ.ಎಂ.ಸಿ ಜಿಲ್ಲಾ ಸಮನ್ವಯ ವೇದಿಕೆ ಕಾರ್ಯದರ್ಶಿ, ಕೆಮ್ಮಾರ ಎಸ್‌.ಡಿ.ಎಂ.ಸಿ ಸದಸ್ಯ ಪದ್ಮನಾಭ ಶೆಟ್ಟಿ ಮತ್ತು ಕುಟುಂಬದವರು ಕೆಮ್ಮಾರ ಸರಕಾರಿ ಶಾಲೆಗೆ ನಿರಂತರ ವಿವಿಧ ರೀತಿಯ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಂ ಹಾಗೂ ಸಹ ಶಿಕ್ಷಕರು ಮತ್ತು ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ ರವರು ಶಾಲಾಭಿವೃದ್ದಿ ಸಮಿತಿ ಪರವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here