ಅನಂತಾಡಿ, ಬಾಕಿಲ ಗುತ್ತುವಿನಲ್ಲಿ ನೂತನ ಸುತ್ತುಪೌಳಿಯ ಶಿಲಾನ್ಯಾಸ

0

ವಿಟ್ಲ: ಅನಂತಾಡಿ ಗ್ರಾಮದ ಬಾಕಿಲ ಗುತ್ತು ಶ್ರೀ ಉಳ್ಳಾಲ್ತಿ ಹೊಸಮ್ಮ, ವೈದ್ಯನಾಥ, ಅಣ್ಣಪ್ಪ ಪಂಜುರ್ಲಿ ಬ್ರಹ್ಮ ಬೈದೇರುಗಳ ಗರಡಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ನೂತನ ಸುತ್ತುಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ಆ.18 ರಂದು ನಡೆಯಿತು.


ವೇದಮೂರ್ತಿ ಶ್ರೀ ಗೋಪಾಲಕೃಷ್ಣ ಬನ್ನಿಂತ್ತಾಯ ಕೊಬ್ರಿಮಠ ರವರ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಕೆ.ಚಿತ್ತರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಯೋಜನೆಯ ನೀಲನಕ್ಷೆ ಅನಾವರಣಗೊಳಿಸಿದರು.

ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಶಿಲನ್ಯಾಸ ನೆರವೇರಿಸಿದರು. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್, ಮುಂಬೈನ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ‌ ಅಧ್ಯಕ್ಷರಾದ ಸೂರ್ಯಕಾಂತ್ ಜೆ.ಸುವರ್ಣ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರಾದ ಕೆ.ಟಿ ಸುವರ್ಣ, ಅನಂತಾಡಿ ಗ್ರಾ.ಪಂ. ಅಧ್ಯಕ್ಷರಾದ ಸುಜಾತ ಸುರೇಶ್, ಮಂಗಳೂರಿನ ಅಮ್ಮುಂಜೆ ಫಾರ್ಮ್ ನ ಧರ್ಮರಾಜ್, ಮಂಗಳೂರಿನ ಕಾರ್ಪರೇಟರ್ ಸಂದೀಪ್ ಗರೋಡಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಟ್ರಸ್ಟಿಗಳಾದ ಜನಾರ್ದನ ಪೂಜಾರಿ ಬಾಕಿಲ, ಸುರೇಶ್ ಬಾಕಿಲ, ಪ್ರಭಾಕರ ಸಾಲ್ಯಾನ್, ಶೇಖರ ಗೋಳಿಕಟ್ಟೆ, ವಾರಿಜಾ ವಸಂತ, ಪುಷ್ಪ ಬಾಕಿಲ, ಗರಡಿ ಅರ್ಚಕರಾದ ಕೃಷ್ಣ ಸಾಲ್ಯಾನ್, ಕೋಶಾಧಿಕಾರಿ ಸಂಕಪ್ಪ ಪೂಜಾರಿ ಮಾಡಾವು, ಪ್ರಮುಖರಾದ ಮೋಹನ್ ಮಲ್ಲಿಪ್ಪಾಡಿ, ಲೋಹಿತ್, ಶ್ರೀಧರ ಪೂಜಾರಿ, ಉಮೇಶ್ ಬಾಕಿಲ, ನಿಶಿತ್ ಪೂಜಾರಿ, ಸೋಮನಾಥ‌ ಸುಳ್ಯ, ಶ್ರೀಧರ ಮಾಡಾವು, ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ನ‌ ಅಧ್ಯಕ್ಷರಾದ ವಸಂತ ಪೂಜಾರಿ ಬಾಕಿಲರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರದ ಉತ್ಸವ ಸಮಿತಿ ಸಂಚಾಲಕರಾದ ಜಯಾನಂದ ಸ್ವಾಗತಿಸಿದರು, ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಅಗತ್ತಾಡಿ ದೊಳಬಾರಿಕೆ ವಂದಿಸಿದರು.

LEAVE A REPLY

Please enter your comment!
Please enter your name here