ಮೆಸ್ಕಾಂ ಕುಂಬ್ರ ಶಾಖೆಯ ಮೆಕ್ಯಾನಿಕ್ ಗಣೇಶರಿಗೆ ಭಡ್ತಿ-ಕಛೇರಿ ಮೇಲ್ವಿಚಾರಕರಾಗಿ ಗುತ್ತಿಗಾರು ಶಾಖೆಗೆ ವರ್ಗಾವಣೆ

0

ಪುತ್ತೂರು: ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಕುಂಬ್ರ ಶಾಖೆಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ವೈ.ರವರು ಕಛೇರಿ ಮೇಲ್ವಿಚಾರಕರಾಗಿ ಭಡ್ತಿಗೊಂಡು ಸುಬ್ರಹ್ಮಣ್ಯ ಉಪ ವಿಭಾಗದ ಗುತ್ತಿಗಾರು ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

ಕುಂಬ್ರ ಶಾಖೆಯಲ್ಲಿ ಪವರ್ ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.1999 ಎಪ್ರೀಲ್ 1 ರಂದು ಪುತ್ತೂರು ಶಾಖೆಗೆ ಸಹಾಯಕ ಲೈನ್‌ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಇವರು 2002-2003 ರ ತನಕ ಈಶ್ವರಮಂಗಲದಲ್ಲಿ ಕ್ಯಾಂಪ್ ಲೈನ್‌ಮ್ಯಾನ್ ಆಗಿ, 2003 ರಿಂದ 2005 ರ ತನಕ ವಿಟ್ಲದಲ್ಲಿ ಲೈನ್‌ಮ್ಯಾನ್ ಆಗಿ 2004 ರಿಂದ 2024 ರ ತನಕ ಕುಂಬ್ರ ಶಾಖೆಯಲ್ಲಿ ಲೈನ್‌ಮ್ಯಾನ್ ಹಾಗೇ ಮೆಕ್ಯಾನಿಕ್ ದರ್ಜೆ|| ರಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ತನ್ನ ಅತ್ಯುತ್ತಮ ಸೇವೆಯಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರಿಗೆ ಹಲವು ಸನ್ಮಾನ, ಗೌರವಾರ್ಪಣೆಗಳು ಸಂದಿವೆ. ಅದರಲ್ಲಿ ಮುಖ್ಯವಾಗಿ ತಿಂಗಳಾಡಿ ರೋಟರಿ, ರೋಟರ‍್ಯಾಕ್ಟ್ ಸಂಸ್ಥೆಯಿಂದ ಹಾಗೇ ಸುದ್ದಿಬಿಡುಗಡೆಯಿಂದ ಉತ್ತಮ ಸೇವೆಗೆ ಪುರಸ್ಕಾರ ಕೂಡ ಲಭಿಸಿದೆ. ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನ ಹಾಗೇ ಮಾಡಾವು ಮಸೀದಿಯ ವತಿಯಿಂದಲೂ ಇವರಿಗೆ ಸನ್ಮಾನ ನಡೆದಿದೆ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿದೆ. ಪ್ರಸ್ತುತ ಇವರು ಪತ್ನಿ ಸುನೀತಾ, ಪುತ್ರರಾದ ಅಸ್ಮಿತ್ ಹಾಗೂ ಅನ್ವಿತ್‌ರವರೊಂದಿಗೆ ಸೋಮೇಶ್ವರ ಗ್ರಾಮದ ಕನೀರ್‌ತೋಟದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here