ಫೋಟೋಗ್ರಾಫರ‍್ಸ್ ಎಸೋಸಿಯೇಶನ್‌ನಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

0

ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್‌ನ ಪುತ್ತೂರು ವಲಯದಿಂದ ಆ.19ರಂದು ಸರಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ‘ವಿಶ್ವ ಛಾಯಾಗ್ರಹಣ ದಿನ’ವನ್ನು ಆಚರಿಸಿದರು.

ಪ್ರಾರಂಭದಲ್ಲಿ ಪ್ರತಿವರ್ಷದಂತೆ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ರಕ್ತದಾನ ಏರ್ಪಡಿಸಲಾಗಿದ್ದು, ಎಸೋಸಿಯೇಶನ್‌ನ ಸದಸ್ಯರು ಭಾಗವಹಿಸಿ ರಕ್ತದಾನ ಮಾಡಿದರು. ನಂತರ ಎಸೋಸಿಯೇಶನ್‌ನ ಹಿರಿಯ ಸದಸ್ಯ ರಾಘವರವರ ನಿವಾಸಕ್ಕೆ ತೆರಳಿ ಅವರನ್ನು ಗೌರವಿಸಿ, ಅವರ ಚಿಕಿತ್ಸೆ ವೆಚ್ಚಕ್ಕಾಗಿ ಧನ ಸಹಾಯ ನೀಡಿದರು. ಮಧ್ಯಾಹ್ನ ಬೀರುಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿರುವ ವಿಶೇಷ ವಿಕಲಚೇತನರ ಜೊತೆಗೂಡಿ ರಕ್ಷಾ ಬಂಧನವನ್ನು ಆಚರಿಸಿ ಅವರಿಗೆ ಸಿಹಿ ತಿಂಡಿ ವಿತರಣೆ ಹಾಗೂ ಮಧ್ಯಾಹ್ನ ಆಶ್ರಮದ ವಿಶೇಷ ಚೇತನರಿಗೆ ಅನ್ನದಾನವನ್ನು ಏರ್ಪಡಿಸಿದರು.
ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಉಪ್ಪಿನಂಗಡಿ, ಗೌರವಾಧ್ಯಕ್ಷ ಹರೀಶ್ ಎಲಿಯ, ಕಟ್ಟಡ ಸಮಿತಿಯ ಸುಧಾಕರ ಶೆಟ್ಟಿ ಸೇರಿದಂತೆ ವಲಯದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here