ಪುಣ್ಚಪ್ಪಾಡಿ ಶಕ್ತಿಕೇಂದ್ರ ಬೂತ್ ಸಂಖ್ಯೆ 69ರಲ್ಲಿ ಮೋದಿ ಜನ್ಮದಿನಾಚರಣೆ ,ಸದಸ್ಯತ್ವ ಅಭಿಯಾನ

0

ಸವಣೂರು : ಪುಣ್ಚಪ್ಪಾಡಿ ಶಕ್ತಿಕೇಂದ್ರ ಬೂತ್ ಸಂಖ್ಯೆ 69ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯಕ್ತ ಸದಸ್ಯತ್ವ ಅಭಿಯಾನವು ಶಕ್ತಿಕೇಂದ್ರ ಪ್ರಮುಖ್ ಮಹೇಶ್ ಕೆ ಸವಣೂರು ಇವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಾರ್ಯಕರ್ತ ಸೋಮನಾಥ ಡಿ ಕನ್ಯಾಮಂಗಲ ಮತ್ತು ಬಾಬು ಕೆ ಪೂಜಾರಿಮೂಲೆ ಹಾಗು ವಿಜಯ ಕೆ ನೇರೋಳ್ತಡ್ಕ ಇವರ ಮನೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯ ಮತ್ತು ಹಿರಿಯ ಕಾರ್ಯಕರ್ತ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮದ ಮಹತ್ವ ಮತ್ತು ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೂತ್ ತಾ.ಪಂ.ಮಾಜಿ ಸದಸ್ಯ ಸೋಮನಾಥ ಡಿ ಕನ್ಯಾಮಂಗಲ,ಸವಣೂರು ಸಿ.ಎ ಬ್ಯಾಂಕ್ ನಿರ್ದೇಶಕರಾದ ಸೀತಾಲಕ್ಷ್ಮಿ, ಬೂತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಬೂತ್ ಕಾರ್ಯದರ್ಶಿ ಮೋಹಿತ್ ಕೆ ಹಾಗು ಕಾರ್ಯಕರ್ತರಾದ ಪುಟ್ಟಣ್ಣ ಗೌಡ ಬದಿಯಡ್ಕ, ನಿತಿನ್ ಪೂಜಾರಿಮೂಲೆ,ವಿಜಯ ನೆರೋಲ್ತಾಡ್ಕ, ಲಕ್ಷ್ಮಿ, ಹರ್ಷಿಕ, ಲೋಕೇಶ್ ಕನ್ಯಾಮಂಗಲ, ತೀರ್ಥನ್ ಬೊಳ್ಳಾಜೆ, ನಿಖಿತ್ ಕೆ, ಗಂಗಾಧರ ಕನ್ಯಾಮಂಗಲ, ಜಗದೀಶ್ ಕೆ,ನಾರಾಯಣ ಕನ್ಯಾಮಂಗಲ,ಸರಿತಾ ಕನ್ಯಾಮಂಗಲ,ಮಲ್ಲಿ ಪಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here