ಪ್ರಧಾನಿ ಮೋದಿ ಜನ್ಮದಿನ: ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಪ್ರಾರ್ಥನೆ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರ ಮತ್ತು ಒಳಮೊಗ್ರು ಶಕ್ತಿಕೇಂದ್ರದ ವತಿಯಿಂದ ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಯಿತು.

ಅಖಂಡ ಭಾರತ ನಿರ್ಮಾಣ ಸಂಕಲ್ಪವಿರಿಸಿರುವ ಪ್ರಧಾನಿಗಳ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಬಿ ಜೆ ಪಿ ಪ್ರಮುಖರಾದ ನಿತೀಶ್ ಕುಮಾರ್ ಶಾಂತಿವನ, ನೆಟ್ಟಣಿಗೆ ಮುಡ್ನೂರು ಮಹಾ ಶಕ್ತಿಕೇಂದ್ರದ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕೋಡಿ, ಒಳಮೊಗ್ರು ಶಕ್ತಿಕೇಂದ್ರದ ಸಂಚಾಲಕರಾದ ಎಸ್ ಮಾಧವ ರೈ ಕುಂಬ್ರ, ಬೂತ್ ಅಧ್ಯಕ್ಷರಾದ ಪುರಂದರ ರೈ ಮುಡಾಲ, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ಬಿಜೆಪಿ ಪ್ರಮುಖರಾದ ರಾಮಯ್ಯ ಗೌಡ ಬೊಳ್ಳಾಡಿ, ಕರುಣಾ ರೈ ಬಿಜಲ, ಚಂದ್ರಕಾಂತ ಶಾಂತಿವನ, ಸಂಜೀವ ಬೊಳ್ಳಾಡಿ, ಚಂದ್ರಶೇಖರ ರೈ ಕುರಿಕ್ಕಾರ, ಶಿವರಾಮ ಗೌಡ ಬೊಳ್ಳಾಡಿ, ಸೊಸೈಟಿ ನಿರ್ದೇಶಕರಾದ ಉಷಾನಾರಾಯಣ ಗೌಡ, ಸುಷ್ಮಾ ಸತೀಶ್, ಆಶಾಮಾಧವ ರೈ ಕುಂಬ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here