ಕೌಡಿಚ್ಚಾರ್ ನಿಂದ ಮಾಯಿಲಕೊಚ್ಚಿವರೆಗೆ ಸ್ವಂತ ಖರ್ಚಿನಲ್ಲಿ ಚರಂಡಿ ದುರಸ್ತಿ – ಸಾರ್ವಜನಿಕರಿಂದ ಪ್ರಶಂಸೆ

0

ಪುತ್ತೂರು: ಕೌಡಿಚ್ಚಾರ್ ನಿಂದ ಮಾಯಿಲಕೊಚ್ಚಿ ವರೆಗೆ ಚರಂಡಿಯನ್ನು ದುರಸ್ತಿಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ.

ಕಳೆದ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಸ್ಥಳೀಯ ನಿವಾಸಿ ಇಸ್ಮಾಯಿಲ್‌ ಹಾಜಿ ಎಂಬವರ ಅಂಗಡಿ ಮತ್ತು ಮನೆಗೆ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿತ್ತು. ಕೌಡಿಚ್ಚಾರಿನಿಂದ ಮಾಯಿಲಕೊಚ್ಚಿ ವರೆಗಿನ ಚರಂಡಿ ದುರಸ್ತಿಯಾಗದಿರುವುದರಿಂದ ಮಳೆನೀರು ಸರಾಗವಾಗಿ ಹರಿಯದೆ ಈ ಅನಾಹುತ ಸಂಭವಿಸಿತ್ತು. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾದ ಇಸ್ಮಾಯಿಲ್‌ ಹಾಜಿ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಕೌಡಿಚ್ಚಾರ್‌ ನಿಂದ ಮಾಯಿಲಕೊಚ್ಚಿಯವರೆಗಿನ ಚರಂಡಿ ದುರಸ್ತಿಗೊಳಿಸಿವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದರು.

LEAVE A REPLY

Please enter your comment!
Please enter your name here