ಕೃಷ್ಣಪ್ರಸಾದ ನುರಿತ್ತಾಯರ ಚೊಚ್ಚಲ ಕೃತಿ ’ಚಕ್ರಾಬ್ಜ ಮಂಡಲ ಆರಾಧನವಿದಿ’ಬಿಡುಗಡೆ

0

ರಾಮಕುಂಜ: ಹಳೆನೇರೆಂಕಿಯ ಕೆ.ಕೃಷ್ಣಪ್ರಸಾದ ನುರಿತ್ತಾಯ ಅವರ ಚೊಚ್ಚಲ ಕೃತಿ ’ಚಕ್ರಾಬ್ಜ ಮಂಡಲ ಆರಾಧನವಿದಿ’ ಅ.10ರಂದು ಸುಬ್ರಹ್ಮಣ್ಯ ಮಠದಲ್ಲಿ ಬಿಡುಗಡೆಗೊಂಡಿತು.


ಕೃತಿ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶವಿತ್ತ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಮಹಾವಿಷ್ಣುವಿನ ಆರಾಧನೆ ಸರ್ವಾಭೀಷ್ಠಪ್ರದವಾದುದು. ಎಲ್ಲ ದೇವತೆಗಳ ಆರಾಧನೆಯು ಅಂತರ್ಗತನಾದ ಭಗವಂತನಿಗೆ ಅರ್ಪಿತ. ಪಂಚಭೂತ ಪದಾರ್ಥಗಳ ಮಧ್ಯೆ ವಾಸಿಸುವ ನಾವು ಭಗವಂತನನ್ನು ಪ್ರತೀಕದಲ್ಲಿ ಉಪಾಸನೆ ಮಾಡಬೇಕು. ಅದರಲ್ಲೂ ಗಾಳಿ, ಆಕಾಶಗಳು ದೃಷ್ಟಿ ಗೋಚರವಲ್ಲ. ಆದ್ದರಿಂದ ಮಣ್ಣು, ನೀರು, ಬೆಂಕಿಗಳ ಪ್ರತೀಕದಲ್ಲಿ ಉಪಾಸನೆ ಮಾಡುತ್ತೇವೆ. ವಿಷ್ಣುವಿನ ಆರಾಧನೆಗೆ ದೊಡ್ಡ ಸಾಧನ ಎಂದರೆ ಮಂಡಲ. ಪಂಚಭೂತ ಪದಾರ್ಥಗಳ ಪ್ರತಿನಿಧಿಯಾಗಿ ಪಂಚವರ್ಣಗಳನ್ನು ಬಳಸಿ ಮಂಡಲ ರಚಿಸಬೇಕು. ಚಕ್ರಾಬ್ಜ ಮಂಡಲದಲ್ಲಿ ಹೇಗೆ ಆರಾಧನೆ ಮಾಡಬೇಕೆಂಬುದನ್ನು ಶಿಷ್ಯ ವಿದ್ವಾಂಸ ಕೃಷ್ಣಪ್ರಸಾದ ನೂರಿತ್ತಾಯ ಇವರು ರಚಿಸಿದ ’ಚಕ್ರಾಬ್ಜಮಂಡಲ ಆರಾಧನವಿಧಿ’ ಕೃತಿಯಲ್ಲಿ ತಿಳಿಸಿದ್ದಾರೆ. ಈ ಕೃತಿ ನಮಗೆ ತುಂಬು ಸಂತಸ ನೀಡಿದೆ ಎಂದು ಹೇಳಿದರು.


ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಟಿ ನಾರಾಯಣ ಭಟ್ ರಾಮಕುಂಜ ಸ್ವಾಗತಿಸಿದರು. ಕೆ.ಕೃಷ್ಣಪ್ರಸಾದ ನೂರಿತ್ತಾಯ ವಂದಿಸಿದರು. ಕೃತಿಯ ಸಹಸಂಪಾದಕ ಸೂರ್ಯಪ್ರಕಾಶ ಉಡುಪ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ದೇವಳದ ಅರ್ಚಕರಾದ ರಾಮಕೃಷ್ಣ ಆಸ್ರಣ್ಣ, ರಮೇಶ ಆಸ್ರಣ್ಣ, ಈರಕಿಮಠ ನರಹರಿ ಉಪಾಧ್ಯಾಯ, ಇಜ್ಜಾವು ಶಿವಪ್ರಸಾದ್, ನಾರಂಪಾಡಿ ಸುದರ್ಶನ ಕೆದಿಲಾಯ, ಸಂಧ್ಯಾ, ಸುನೀತ,ಸುಕೃತ್ ಕೆದಿಲಾಯ, ಸುಮೀಕ್ಷಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here