ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ, ಭಜನ್ ಸಂಧ್ಯಾ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.9 ರಂದು ರಾತ್ರಿ ನವರಾತ್ರಿ ಉತ್ಸವದ  ಪ್ರಯುಕ್ತ ಬನ್ನೂರು ಬಲಮುರಿ ಶ್ರೀದುರ್ಗಾ ಗಣಪತಿ ಗಾನವೃಂದದ ಕಲಾವಿದರಿಂದ ಭಜನ್ ಸಂಧ್ಯಾ ಬಳಿಕ ಮಹಾಪೂಜೆ ಜರಗಿತು.

ಅ.10 ರಂದು ರಾತ್ರಿ ಮೊಟ್ಟೆತ್ತಡ್ಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ ಜರಗಿತು. ಅ.11 ರಂದು ಇಂಚರ ಮ್ಯೂಸಿಕಲ್ ಪುತ್ತೂರು ಕಲಾವಿದರಿಂದ ಸಂಗೀತ ರಸಸಂಜೆ ಬಳಿಕ ಮಹಾಪೂಜೆ ಜರಗಲಿದೆ  ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಾಹನಗಳಿಗೆ ಆಯುಧಪೂಜೆ
ಅ.9 ಹಾಗೂ 10 ರಂದು ರಾತ್ರಿ ಪ್ರಧಾನ ಅರ್ಚಕ ಉದಯನಾರಾಯಣ ಕಲ್ಲೂರಾಯ ಹಾಗೂ ಸಹ ಅರ್ಚಕ ರಮೇಶ್ ಅಯ್ಯರ್ ಮುಕ್ರಂಪಾಡಿರವರಿಂದ ವಾಹನಗಳಿಗೆ ಆಯುಧಪೂಜೆ ನಡೆಯಿತು. ಅ.11 ರಂದು ವಾಹನಗಳಿಗೆ ಆಯುಧಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here