ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ಆಯುಧ ಪೂಜೆ 

0

ಬಡಗನ್ನೂರು: ಸುಳ್ಯಪದವು  ಆಯುಧ ಪೂಜಾ ಸೇವಾ ಸಮಿತಿ  ವತಿಯಿಂದ ನಡೆಸಲ್ಪಡುವ 29ನೇ ವರ್ಷದ ಸಾರ್ವಜನಿಕ ಆಯುಧ ಪೂಜಾ,ಕಾರ್ಯಕ್ರಮವು ಅ.12ರಂದು  ವಿಜೃಂಭಣೆಯಿಂದ ನಡೆಯಿತು.

ಅ.12 ರಂದು ಪೂರ್ವಾಹ್ನ ಶ್ರೀ ಗಣಪತಿ ಹೋಮ ನಡೆದು ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕೆ.ಎಸ್ ಆರ್.ಟಿ.ಸಿ ನಿವೃತ್ತ ಅಧಿಕಾರಿ ಸಾಂತಪ್ಪ ಪೂಜಾರಿ ಕಡಮಗದ್ದೆ  ದೀಪ ಪ್ರಜ್ವಲಿಸಿ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ವಾಹನ ಪೂಜೆ;- 
ಸುಮಾರು ನೂರಕ್ಕೂ ಮಿಕ್ಕಿ  ವಾಹನ ಮಾಲೀಕರು ತಮ್ಮ ವಾಹನಗಳನ್ನು ತಂದು ಪೂಜೆ ಮಾಡಿಸಿಕೊಂಡರು. ಮಧ್ಯಾಹ್ನ ಸಾರ್ವಜನಿಕ ಅನ್ನ ಪ್ರಸಾದ ಭೋಜನ ವಿತರಣೆ ಮಾಡಲಾಯಿತು. ರಾತ್ರಿ  ಭಜನಾ ಮಂಗಲ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಆಯುಧ ಪೂಜಾ ಸಮಿತಿ ಗೌರವಾಧ್ಯಕ್ಷ  ಜನಾರ್ಧನ ಎಂ. ಎನ್., ಪಿಲಿಪ್ಪುಡೆ ಅಧ್ಯಕ್ಷ ಸುಂದರ್ ಕನ್ನಡ,  ಕಾರ್ಯದರ್ಶಿ ಅಜಿತ್ ಕಾಯರ್‌ಪದವು , ಶ್ರೀ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಸೇಸಪ್ಪ ಪೂಜಾರಿ ಕಡಮಗದ್ದೆ,   ಕೊರಗಜ್ಜ  ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಹಾಗೂ  ಆಯುಧ ಪೂಜಾ ಸೇವಾ ಸಮಿತಿ ಸದಸ್ಯರು, ಕೊರಗಜ್ಜ ಸೇವಾ ಸಮಿತಿ ಸದಸ್ಯರು, ಜಾಗ್ರತ ಹಿಂದೂ ಜಾಗರಣ ಸಮಿತಿ ಸದಸ್ಯರು, ಶ್ರೀ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರು ಮತ್ತು ಊರ ಭಕ್ತಾದಿಗಳು ಭಾಗವಹಿಸಿದ್ದರು.

ಭಜನಾ ಕಾರ್ಯಕ್ರಮ
ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.ಸುಳ್ಯಪದವು,  ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ,  ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಸುಳ್ಯಪದವು  ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ (ರಿ.) ಸುಳ್ಯಪದವು, ಹಾಗೂ ಶ್ರೀ ಅಯ್ಯಪ್ಪ ಭಕ್ತವೃಂದ, ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ವಿವಿಧ ಸ್ಪರ್ಧೆಗಳು
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

 ಸಭಾ ಕಾರ್ಯಕ್ರಮ:-
ಸಭಾ ಕಾರ್ಯಕ್ರಮವು ಅಯುಧ ಪೂಜಾ ಸಮಿತಿ ಅಧ್ಯಕ್ಷ ಸುಂದರ್ ಕನ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ, ಬೆಂಗಳೂರು, ಅಡ್ವಕೇಟ್ ರಾಮ್ ಪ್ರಸಾದ್ ಶೆಟ್ಟಿ ಬೇರಿಕೆ. ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್ ನ ಜನಾರ್ಧನ ಪೂಜಾರಿ ಪದಡ್ಕ, ಭಾಗವಹಿಸಿದ್ದರು.

 ಗೌರವಾರ್ಪಣೆ
ಸರ್ವೋದಯ ವಿದ್ಯಾಸಂಸ್ಥೆಯ  ನಿವೃತ್ತ ಮುಖ್ಯೋಪಾಧ್ಯಾಯರಾದ ಸತ್ಯಶಂಕರ ಭಟ್ ವಿಟ್ಲ,  ಸಾಯಿ ಗಣೇಶ್ ಮಾಜಿ ಬಸ್ ಚಾಲಕ ಮಂಜುನಾಥ (ಮಂಜಪ್ಪಣ್ಣ) ರವರನ್ನು ಅಭಿನಂದಿಸಲಾಯಿತು.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  “ಪರಮಾತ್ಮ ಪಂಜುರ್ಲಿ” ನಾಟಕ , ಸಿಡಿಮದ್ದು ಪ್ರದರ್ಶನ  ನಡೆಯಿತು.

LEAVE A REPLY

Please enter your comment!
Please enter your name here