ಉಪ್ಪಿನಂಗಡಿ ಸಿಎ ಬ್ಯಾಂಕ್ ಚುನಾವಣೆ:12 ಸ್ಥಾನಗಳಲ್ಲೂ ಸಹಕಾರ ಭಾರತಿಗೆ ಗೆಲುವು

0

ಉಪ್ಪಿನಂಗಡಿ: ಬಹಳ ಕುತೂಹಲವನ್ನು ಉಂಟು ಮಾಡಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಚುನಾವಣೆಯನ್ನು ಎದುರಿಸಿದ್ದ ಸಹಕಾರ ಭಾರತಿಯ ಎಲ್ಲಾ 11 ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದು, ಸಹಕಾರ ಭಾರತಿಯ ಒರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರಿಂದ ಎಲ್ಲಾ ಹನ್ನೆರಡೂ ಸ್ಥಾನಗಳು ಸಹಕಾರ ಭಾರತಿಗೆ ಒಲಿದಂತಾಗಿದೆ.


ಈ ಹಿಂದೆಯೂ ಸಹಕಾರ ಭಾರತಿಯ ಆಡಳಿತದಲ್ಲಿದ್ದ ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿದ್ದ ಕೆ.ವಿ. ಪ್ರಸಾದರವರು ಸಂಘಟನೆಯ ತೀರ್ಮಾನದಂತೆ ಸ್ಪರ್ಧೆಗೆ ಅವಕಾಶ ವಂಚಿತರಾಗಿದ್ದರು. ಇದರಿಂದ ಆಕ್ರೋಶಗೊಂಡ ಅವರು ಬಂಡಾಯವೆದ್ದು ಚುನಾವಣೆಗೆ ಸ್ಪರ್ಧಿಸಿದ್ದರು. ಅದಲ್ಲದೇ, ಈ ಬಾರಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ತನ್ನ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರು ಪಕ್ಷೇತರರು ಕಣದಲ್ಲಿದ್ದರು. ಹೀಗಾಗಿ 11 ಸ್ಥಾನಕ್ಕೆ 25 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದದ್ದರಿಂದ ಈ ಬಾರಿ ಚುನಾವಣಾ ಕಣ ರಂಗೇರಿತ್ತು.


ಗೆದ್ದ ಅಭ್ಯರ್ಥಿಗಳ ವಿವರ:
ಸಾಲಗಾರರಲ್ಲದ ಮತಕ್ಷೇತ್ರದಿಂದ ಸಹಕಾರ ಭಾರತಿಯ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಕ್ಕಾಗಿ ಫೆ.2ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳಾದ ಸಾಲಗಾರರ ಕೃಷಿಯೇತರ ಮತಕ್ಷೇತ್ರದಿಂದ ರಾಜೇಶ್, ಸಾಲಗಾರರ ಮತಕ್ಷೇತ್ರ (ಕೃಷಿ ಸಾಲದ ಸಾಮಾನ್ಯ ಸ್ಥಾನ)ದಿಂದ ವಸಂತ ಪಿ., ಶ್ರೀರಾಮ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ, ಸಂಧ್ಯಾ, ಸುನೀಲ್ ದಡ್ಡು, ದಯಾನಂದ ಎಸ್., ಸುಂದರ ಕೆ., ರಾಘವ ನಾಯ್ಕ್ ಗೆಲುವು ಸಾಧಿಸಿದ್ದಾರೆ.


ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ದಯಾನಂದ ಶೆಟ್ಟಿ ಉಜಿರೆಮಾರ್, ಕೃಷ್ಣ ಕುಮಾರ್ ರೈ, ಮುರಳೀಕೃಷ್ಣ ಹಸಂತಡ್ಕ, ಪ್ರಸನ್ನ ಮಾರ್ತ , ಸುರೇಶ್ ಬನ್ನೆಂಗಳ, ಬಾಲಕೃಷ್ಣ ಗೌಡ ಮತ್ತಿತರರು ಆಗಮಿಸಿ ವಿಜೇತರನ್ನು ಮತ್ತು ಕಾರ್ಯಕರ್ತರನ್ನು ಅಭಿನಂದಿಸಿದರು.

ಬಿಜೆಪಿ ವಿಜಯೋತ್ಸವದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ ಜೈನ್, ಪ್ರಮುಖರಾದ ಮೋಹನ್ ಪಕ್ಕಳ, ರಾಮಚಂದ್ರ ಪೂಜಾರಿ, ಪ್ರಶಾಂತ್ ನೆಕ್ಕಿಲಾಡಿ, ಸುಜಾತ ರೈ ಅಲಿಮಾರ್, ಬಿಜೆಪಿ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ರವೀಂದ್ರ ಆಚಾರ್ಯ, ಪ್ರಸಾದ್ ಬಂಡಾರಿ, ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ತಿಮ್ಮಪ್ಪ ಗೌಡ, ಸುದರ್ಶನ್, ರವೀಂದ್ರ ಆಚಾರ್ಯ, ಮಹೇಶ್ ಬಜತ್ತೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here