ಬಡಗನ್ನೂರು: ಅರಿಯಡ್ಕ ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳ ರವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ವೈದ್ಯಕೀಯ ಸಹಾಯಕ್ಕೆ ರೂ 25,000/- ಅನುದಾನ ಮಂಜೂರಾತಿ ಮಾಡಿದ್ದು, ಮಂಜೂರಾತಿ ಪತ್ರವನ್ನು ಅವರ ಮನೆಗೆ ಭೇಟಿ ನೀಡಿ ದಿನೇಶ್ ರೈ ಮತ್ತು ಅವರ ಧರ್ಮ ಪತ್ನಿ ಪವಿತ್ರರವರಿಗೆ ವಲಯ ಮೇಲ್ವಿಚಾರಕರು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಸುಂದರ್ ಜಿ ಹಾಗೂ ಗಾಯತ್ರಿ ಉಪಸ್ಥಿತರಿದ್ದರು.