ಪುತ್ತೂರು: ಕೆದಿಲ ಗ್ರಾಮದ ಕರಿಮಜಲು ರಾಮಮೂಲ್ಯ ಮತ್ತು ಕಂಪ ಲೋಕಯ ಗೌಡ ಇವರು ಅನಾರೋಗ್ಯದಿಂದಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಶೌಚಾಲಯಕ್ಕೆ ಅನುಕೂಲಕ್ಕಾಗಿ ಕೊಮೋಡೋ ವೀಲ್ ಚೆಯರನ್ನು ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದರವರು ಮತ್ತು ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾರವರು ವಿತರಿಸಿದರು.
ಈ ಸಂದರ್ಭದಲ್ಲಿ ಕೆದಿಲ ಒಕ್ಕೂಟದ ಸೇವಾಪ್ರತಿನಿಧಿ ಶಾರದಾ ಮತ್ತು ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ, ವೆಂಕಪ್ಪ , ಶೀನಪ್ಪ, ಗಿರೀಶರವರು ಉಪಸ್ಥಿತರಿದ್ದರು.