ಅಧ್ಯಕ್ಷರಾಗಿ ಕರೀಂ ಹಾಜಿ ಚೆನ್ನಾರ್, ಪ್ರ.ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ, ಕೋಶಾಧಿಕಾರಿಯಾಗಿ ಜಲೀಲ್ ಸಖಾಫಿ ಜಾಲ್ಸೂರು
ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಸಮಿತಿ ಪುನರ್ರಚನಾ ಸಭೆ ಪುತ್ತೂರು ಪ್ರೆಸ್ಟೇಜ್ ಸಭಾಂಗಣದಲ್ಲಿ ಝೋನ್ ಅಧ್ಯಕ್ಷ ಕೆ.ಬಿ ಕಾಸಿಂ ಹಾಜಿ ಮಿತ್ತೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಜಂಇಯ್ಯತುಲ್ ಉಲಮಾ ನೇತಾರ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಉದ್ಘಾಟಿಸಿದರು. ಝೋನ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ವರದಿ ಮಂಡಿಸಿದರು. ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಲೆಕ್ಕಪತ್ರ ಮಂಡಿಸಿದರು.
ಚುನಾವಣಾಧಿಕಾರಿಯಾಗಿ ಆಗಮಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆಯವರು 2025-27ನೇ ಸಾಲಿಗೆ 29 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಿದರು. ನೂತನ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸತತ ಎರಡನೇ ಬಾರಿಗೆ ಇಕ್ಬಾಲ್ ಬಪ್ಪಳಿಗೆ ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಉಪಾಧ್ಯಕ್ಷರಾಗಿ ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ದಅವಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಮಾಧ್ಯಮ ಕಾರ್ಯದರ್ಶಿಯಾಗಿ ಮುಹಮ್ಮದ್ ಹಬೀಬ್ ಶೇರಾ, ಇಸಾಬಾ ಕಾರ್ಯದರ್ಶಿಯಾಗಿ ನಝೀರ್ ಪಾಟ್ರಕೋಡಿ, ಸಹಾಯ್ ಕಾರ್ಯದರ್ಶಿಯಾಗಿ ಉಸ್ಮಾನ್ ಹಾಜಿ ಕಬಕ, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಯೂಸುಫ್ ಹಾಜಿ ಗೌಸಿಯಾ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಉಸ್ತಾದ್ ಬನ್ನೂರು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಕೆ.ಬಿ ಕಾಸಿಂ ಹಾಜಿ ಮಿತ್ತೂರು, ಇಝ್ಝುದ್ದೀನ್ ಮುಸ್ಲಿಯಾರ್ ಮಾಡನ್ನೂರು, ಆದಂ ಹಾಜಿ ಈಶ್ವರಮಂಗಳ, ಉಮರ್ ಹಾಜಿ ಕಬಕ, ಇಸ್ಮಾಯಿಲ್ ಹಾಜಿ ಹಸನ್ ನಗರ, ಅಬ್ದುಲ್ ಕುಂಞಿ ಕೊಡಿಪ್ಪಾಡಿ, ಅಬೂಬಕ್ಕರ್ ಮುಸ್ಲಿಯಾರ್ ಕುಂಬ್ರ, ಮುಹಮ್ಮದ್ ಕೆಜಿಎನ್, ಹಂಝ ಲತೀಫಿ ಮಾಡಾವು, ಮೂಸಾ ಕುಂಞಿ ಅಮ್ಚಿನಡ್ಕ, ಹುಸೈನ್ ಮುಸ್ಲಿಯಾರ್ ಮಾಡಾವು, ಯೂಸುಫ್ ಹಾಜಿ ಸೂರಿಕುಮೇರ್, ಹಾಜಿ ಅಬ್ದುಲ್ ರಝಾಕ್ ಫಲಾಹ್ ಕಲ್ಲಡ್ಕ, ಮುಹಮ್ಮದ್ ಮದನಿ ಇರ್ದೆ, ಮೂಸಾ ಮದನಿ ರೆಂಜ, ಮೂಸಾ ಚೇಲಡ್ಕ, ಇಬ್ರಾಹಿಂ ಸಂಪ್ಯ, ಆದಂ ಹಾಜಿ ಪಡೀಲ್, ಮಜೀದ್ ಬನ್ನೂರು, ಇಸ್ಮಾಯಿಲ್ ಹಾಜಿ ಬನ್ನೂರುರವನ್ನು ಆರಿಸಲಾಯಿತು.
ಜಿಲ್ಲಾ ಕೌನ್ಸಿಲರುಗಳಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಯೂಸುಫ್ ಸಯೀದ್ ಪುತ್ತೂರು, ಕೆ.ಬಿ ಕಾಸಿಂ ಹಾಜಿ ಮಿತ್ತೂರು, ಯೂಸುಫ್ ಹಾಜಿ ಗೌಸಿಯಾ, ಅಬ್ದುಲ್ ಅಝೀಝ್ ನೂರಾನಿ, ಮಜೀದ್ ಬನ್ನೂರು, ಯೂಸುಫ್ ಹಾಜಿ ಸೂರಿಕುಮೇರ್, ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಹಂಝ ಲತೀಫಿ ಮಾಡಾವು, ಆದಂ ಹಾಜಿ ಪಡೀಲ್, ಯೂಸುಫ್ ವಳಂಗಾಜೆ, ಅಬ್ದುರ್ರಹ್ಮಾನ್ ಕಬಕ, ಅಬ್ದುಲ್ಲಾ ಉಸ್ತಾದ್ ಬನ್ನೂರು, ಮುಹಮ್ಮದ್ ಕೆಜಿಎನ್, ಕೆ.ಎಚ್ ಇಸ್ಮಾಯಿಲ್, ಉಸ್ಮಾನ್ ಮುಸ್ಲಿಯಾರ್ ಕುಂಬ್ರ ಹಾಗೂ ಯೂಸುಫ್ ದರ್ಬೆ ಆಯ್ಕೆಗೊಂಡರು.
ಪುತ್ತೂರು ಝೋನ್ ಉಸ್ತುವಾರಿ ಹನೀಫ್ ಹಾಜಿ ಇಂದ್ರಾಜೆ ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದರು. ಮೇಲ್ವಚಾರಕರಾಗಿ ಆಗಮಿಸಿದ ದ. ಕ. ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ಮಾತನಾಡಿದರು.
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಎಸ್ವೈಎಸ್ ಝೋನ್ ನಾಯಕರಾದ ಶಾಹುಲ್ ಹಮೀದ್ ತಾಜ್, ಮಜೀದ್ ಪಾಟ್ರಕೋಡಿ ಮೊದಲಾವರು ಉಪಸ್ಥಿತರಿದ್ದರು. ಝೋನ್ ವ್ಯಾಪ್ತಿಯ ಏಳು ಸರ್ಕಲ್ಗಳ ಝೋನ್ ಕೌನ್ಸಿಲರುಗಳು ಭಾಗವಹಿಸಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುಲ್ಲಾ ಉಸ್ತಾದ್ ಬನ್ನೂರು ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ವಂದಿಸಿದರು.