ಪುಣಚ: ಪುಣಚ ಗ್ರಾಮದ ಪಂಡಿತಮೂಲೆ ನಿವಾಸಿ ಪ್ರಗತಿಪರ ಕೃಷಿಕ ರಾಮಣ್ಣ ಮಡಿವಾಳ (74 ವರ್ಷ) ಹೃದಯಾಘಾತದಿಂದ ಮೇ.12ರಂದು ಸ್ವ ಗೃಹದಲ್ಲಿ ನಿಧನರಾದರು. ಮೃತರು ಹಲವಾರು ವರ್ಷಗಳಿಂದ ದೈವದ ಚಾಕರಿ ಸೇವೆಯನ್ನು ನಿರ್ವಹಿಸುತ್ತಾ ಬಂದಿದ್ದು, ಎಲ್ಲರ ಚಿರಪರಿಚಿತರಾಗಿದ್ದರು. ಅಲ್ಲದೆ ಭಾರತೀಯ ಜನಸಂಘದಲ್ಲಿ ಜನತಾ ಪಾರ್ಟಿಯ ಹಿತೈಷಿಯಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಜಾನಕಿ, ಪುತ್ರ ರೋಹಿತ್ ಕುಮಾರ್, ಪುತ್ರಿಯರಾದ ರಾಜೇಶ್ವರಿ, ಹೇಮಾಮಾಲಿನಿ, ಸೊಸೆ ಪುಣಚ ಗ್ರಾ.ಪಂ ಸದಸ್ಯೆ ವಾಣಿಶ್ರೀ, ಸಹೋದರರು, ಮೊಮ್ಮಕ್ಕಳನ್ನು ಅಗಲಿದ್ದಾರೆ.