ನಿಡ್ಪಳ್ಳಿ ಶಾಲಾ ಮಂತ್ರಿ ಮಂಡಲ ರಚನೆ- ನಾಯಕನಾಗಿ ದಿಕ್ಷೀತ್ ಕುಮಾರ್, ಉಪ ನಾಯಕನಾಗಿ ಶಿವಾಂಕ್

0

ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಜೂ.14 ರಂದು ರಚಿಸಲಾಯಿತು. ನಾಯಕನಾಗಿ 7ನೇ ತರಗತಿಯ ದಿಕ್ಷೀತ್ ಕುಮಾರ್, ಉಪನಾಯಕನಾಗಿ 7ನೇ ತರಗತಿಯ ಶಿವಾಂಕ್ ಆಯ್ಕೆಯಾದರು.

ಗೃಹ ಮಂತ್ರಿಯಾಗಿ  ಮಹಮ್ಮದ್ ಶಹೀರ್, ಆರೋಗ್ಯ ಮಂತ್ರಿಯಾಗಿ ನೆಫಿಸತ್ ತ್ವಾಹಿಬಾ, ಉಪ ಆರೋಗ್ಯ ಮಂತ್ರಿಯಾಗಿ ಆರತಿ ಎಂ.ಸಾಲ್ಯಾನ್, ಶಿಕ್ಷಣ ಮಂತ್ರಿಯಾಗಿ ವಿನೋದ್, ಉಪ ಶಿಕ್ಷಣ ಮಂತ್ರಿಯಾಗಿ ತನುಶ್ರೀ, ಸ್ವಚ್ಚತಾ ಮಂತ್ರಿಯಾಗಿ ಮಹಮ್ಮದ್ ಸವಾದ್, ಉಪ ಸ್ವಚ್ಚತಾ ಮಂತ್ರಿಯಾಗಿ ಮಹಮ್ಮದ್ ಷಾಬಿಷ್, ವಾರ್ತಾ ಮಂತ್ರಿಯಾಗಿ ಸ್ನೇಹಾ, ಉಪ ವಾರ್ತಾ ಮಂತ್ರಿಯಾಗಿ ಖುಷಿ, ಸಾಂಸ್ಕೃತಿಕ ಮಂತ್ರಿಯಾಗಿ ಭವ್ಯಶ್ರೀ, ಉಪಸಾಂಸ್ಕೃತಿಕ ಮಂತ್ರಿಯಾಗಿ ವೈಣವಿ, ಆಹಾರ ಮಂತ್ರಿಯಾಗಿ ವರುಣ್ ಕುಮಾರ್, ಉಪ ಆಹಾರ ಮಂತ್ರಿಯಾಗಿ ಪೃಥ್ವಿರಾಜ್,ಗ್ರಂಥಾಲಯ ಮಂತ್ರಿಯಾಗಿ ಆಯಿಷತ್ ಸಫಾನ, ಉಪ ಗ್ರಂಥಾಲಯ ಮಂತ್ರಿಯಾಗಿ ಚೇತನ್, ಶಿಸ್ತು ಮಂತ್ರಿಯಾಗಿ ರೋಹಿತ್ ಎಂ, ಉಪ ಶಿಸ್ತು ಮಂತ್ರಿಯಾಗಿ ಮನೀಷ ಪಿ,ಕ್ರೀಡಾ ಮಂತ್ರಿಯಾಗಿ ಜಶ್ವಿತ್, ನೀರಾವರಿ ಮಂತ್ರಿಯಾಗಿ ದಿಕ್ಷೀತ್ ಕುಮಾರ್, ಉಪ ನೀರಾವರಿ ಮಂತ್ರಿಯಾಗಿ ರೋಹಿತ್, ಕೃಷಿ ಮಂತ್ರಿಯಾಗಿ ಮನಸ್ವಿ, ರಕ್ಷಣಾ ಮಂತ್ರಿಯಾಗಿ ಮನೀಷ್, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಶಹೇಲ್ ಇವರನ್ನು ಆರಿಸಲಾಯಿತು.

ಮುಖ್ಯ ಗುರು ಹೇಮಾ. ಎನ್ ಇವರ ನೇತೃತ್ವದಲ್ಲಿ ಚುನಾವಣೆ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅತಿಥಿ ಶಿಕ್ಷಕಿಯರಾದ ಸುಮ.ಡಿ ಹಾಗೂ ಸುಜಾತ ಸಹಕರಿಸಿದರು.

LEAVE A REPLY

Please enter your comment!
Please enter your name here