ನೆಲ್ಯಾಡಿ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗೋಳಿತ್ತೊಟ್ಟು ಗ್ರಾಮದ ಒಡಿಯೂರು ಶ್ರೀ ನವಮಿ ಗ್ರಾಮ ವಿಕಾಸ ಯೋಜನೆ ಸ್ವಸಹಾಯ ಸಂಘದ ಸದಸ್ಯ ಗಗನ್ ರಾಜ್ ಶೆಟ್ಟಿಯವರ ನಷ್ಟ ಪರಿಹಾರ ಮೊತ್ತ ರೂ.25 ಸಾವಿರವನ್ನು ಅವರ ವಾರೀಸುದಾರ ರವಿಚಂದ್ರರವರಿಗೆ ವಿತರಿಸಲಾಯಿತು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ಕಮಲ, ಯೋಜನೆಯ ಮೇಲ್ವಿಚಾರಕರಾದ ಸವಿತಾ ರೈ ಹಾಗೂ ಗೋಳಿತ್ತೊಟ್ಟು ವಲಯದ ಸಂಯೋಜಕಿ ಭಾರತಿ ಡಿ.ಕೆ.ಅವರ ಉಪಸ್ಥಿತಿಯಲ್ಲಿ ಚೆಕ್ ವಿತರಣೆ ಮಾಡಲಾಯಿತು.