ಕಾಣಿಯೂರು: ಕೊಪ್ಪ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮುಖ್ಯ ಗುರು ನಾರಾಯಣ. ಡಿ. ಯೋಗ ದಿನಾಚರಣೆಯ ಮಹತ್ವದ ಕುರಿತು ವಿವರಿಸುತ್ತ, ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸಲು ಯೋಗದ ಅಗತ್ಯವಿದೆ. ಕಿರಿಯ ವಯಸ್ಸಿನಿಂದ ಹಿಡಿದು ಹಿರಿಯರಿಗೂ ಮಾಡಬಹುದಾದ ಸರಳ ವ್ಯಾಯಾಮ ಯೋಗದಲ್ಲಿ ಅಡಕವಾಗಿದೆ. ಇದನ್ನು ನಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಂಡರೆ ವಿವಿಧ ರೋಗಗಳು ಬರದಂತೆ ತಡೆಯಲು ಸಾಧ್ಯ ಎಂದರು. ಬಳಿಕ ಅತಿಥಿ ಶಿಕ್ಷಕ ಸುರೇಶ ನಾಯ್ಕ ಹಾಗೂ ಗೌರವ ಶಿಕ್ಷಕಿ ಹವ್ಯ ರವರು ವಿದ್ಯಾರ್ಥಿಗಳಿಂದ ಯೋಗಾಸನಗಳನ್ನು ಮಾಡಿಸಿದರು.
