ಕಡೇಶಿವಾಲಯ ನೂತನ ಗ್ರಾ.ಪಂ ‘ಪ್ರಗತಿ ಸೌಧ’ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ಕಡೇಶಿವಾಲಯದ ನೂತನ ಗ್ರಾ.ಪಂ ಕಚೇರಿ ಹಾಗೂ ಸಭಾಂಗಣ ಕಟ್ಟಡ ಪ್ರಗತಿ ಸೌಧದ ಲೋಕಾರ್ಪಣ ಕಾರ್ಯಕ್ರಮ ಜೂ.20ರಂದು ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಪಂಚಾಯತ್ ಕಚೇರಿ ಮತ್ತು ಸಭಾಂಗಣವನ್ನು ರಿಮೋಟ್ ಮೂಲಕ ಲೋಕಾರ್ಪಣೆಗೊಳಿಸಿ,ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗ್ಯಾರಂಟಿ‌ ಸಮಿತಿಯ ಅಧ್ಯಕ್ಷೆ ಜಯಂತಿ ವಹಿಸಿ ಶುಭಹಾರೈಸಿದರು. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಶುಭಹಾರೈಸಿದರು.ಈ ಸಂದರ್ಬದಲ್ಲಿ ನೂತನ ಕಚೇರಿಯಲ್ಲಿ ಫಲಾನುಭವಿ ಚಂದ್ರಹಾಸ ಶೆಟ್ಟಿ ಅವರಿಗೆ ವ್ಯಾಪಾರ ಪರವಾಣಿಗೆಯನ್ನು ನೀಡಿ ಸಾರ್ವಜನಿಕ‌ ಸೇವೆಗೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಭಾರತಿ ಎಸ್ ರಾವ್,ಉಪಾಧ್ಯಕ್ಷ ಸುರೇಶ್ ಪೂಜಾರಿ ಕೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ಗುತ್ತಿಗೆದಾರ ಪ್ರತಾಪ್ ಶೆಟ್ಟಿ ಪಾಂಡಿಬೆಟ್ಟು ಮತ್ತು ಪಂಚಾಯತ್ ಕರವಸೂಲಿಗಾರ,ಕಾರ್ಯದರ್ಶಿ ಚಂದಪ್ಪ ನಾಯ್ಕರನ್ನು ಸನ್ಮಾನಿಸಲಾಯಿತು.

ಗೌರವ ಅಭಿನಂದನೆ:
ಕಟ್ಟಡ ನಿರ್ಮಾಣಕ್ಕೆ ದುಡಿದ ನಾಗೇಶ್ ಜೆ.ಇ,ನರೇಗಾ ಇಂಜಿನಿಯರ್ ಆತಿಶ್,ಇಂಟಿರಿಯರ್ ಡಿಸೈನರ್ ಸುಮಂತ್,ಎಲೆಕ್ಟ್ರೀಸಿಯನ್ ಭುವನೇಶ್, ಎನ್ ಆರ್ ಎನ್ ಎಮ್ ಬಿ ಕೆ ಮಮತಾ,ಎಮ್ ಸಿ ಆರ್ ಪಿ ಸುಧಾ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಪಂ.ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸ್ವಾಗತಿಸಿ,ಪ್ರಸ್ತಾವಿಸಿದರು.ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಬನಾರಿ ವಂದಿಸಿದರು. ಮಲ್ಲಿಕಾ ಕಡೇಶಿವಾಲಯ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸರ್ವ ಸದಸ್ಯರು, ಮಾಜಿ‌ ಅಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು,ಕಡೇಶಿವಾಲಯ ಶಾಲೆಗಳ ಶಿಕ್ಷಕ ವೃಂದ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು,ಮಾತೃ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here