ಪುತ್ತೂರು: ಸಮರ್ಥ ಜನ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ವತಿಯಿಂದ ಪುಣ್ಚಪ್ಪಾಡಿ ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರದಿಂದ ವಿವಿಧ ಸವಲತ್ತು ನೀಡುವುದರ ಬಗ್ಗೆ ನೂರೊಂದು ಬೇಡಿಕೆ ಯನ್ನು ಸವಣೂರು ಗ್ರಾ.ಪಂನ ಪ್ರಭಾರ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಯವರಿಗೆ ಸಲ್ಲಿಸಲಾಯಿತು.
ಸಮರ್ಥ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ ಸುಲಾಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ ಸವಣೂರು, ಸದಸ್ಯ ಸುಹಾಸ್ ಕಾರಂತ ಉಪಸ್ಥಿತರಿದ್ದರು.