ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯದ ಮಾತೃ ವೇದಿಕೆಯ ಪದಾಧಿಕಾರಿಗಳ ಸಭೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಅಲ್ಫೋನ್ಸ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ 2025-28ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉದನೆ ವಲಯ ಅಧ್ಯಕ್ಷೆಯಾಗಿ ಅಡ್ಡಹೊಳೆ ಸೈಂಟ್ ಜೋಸೆಫ್ ಯುನಿಟ್ನ ರೇಖಾ ಆಗಸ್ಟಿನ್, ಉಪಾಧ್ಯಕ್ಷೆಯಾಗಿ ಮಿನಿ ಪ್ರಕಾಶ್ ಶಿರಾಡಿ, ಕಾರ್ಯದರ್ಶಿಯಾಗಿ ಅನುಷಾ ಎಂ.ಕೆ. ನೆಲ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಿಯಾ ಅನೀಶ್ ಆರ್ಲ, ಕೋಶಾಧಿಕಾರಿಯಾಗಿ ಸ್ವೀಟಿ ಸಣ್ಣಿ ಉದನೆ ಆಯ್ಕೆಯಾದರು.
ನೆಲ್ಯಾಡಿ ಅಲ್ಫೋನ್ಸ ಪುಣ್ಯಕ್ಷೇತ್ರದ ವಂ|ಫಾ| ಶಾಜಿ ಮ್ಯಾಥ್ಯು ಹಾಗೂ ಉದನೆಯ ವಂ| ಫಾ| ಸಿಬಿ ತೋಮಸ್ ವಿವಿಧ ವಿಷಯಗಳ ಮೇಲೆ ಮಾಹಿತಿ ನೀಡಿದರು. ಪ್ರಾಂತೀಯ ಕಾರ್ಯದರ್ಶಿ ಜೆಸ್ಸಿ ಕೆ.ಜೆ., ಆನಿಮೇಟರ್ ಸಿ| ಲಿಸ್ ಮ್ಯಾಥ್ಯು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಜಾ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.