ಶರವೂರು ದೇವಸ್ಥಾನದಲ್ಲಿ ’ಶಲ್ಯ ಸಾರಥ್ಯ’ ಯಕ್ಷಗಾನ ತಾಳಮದ್ದಳೆ

0

ಆಲಂಕಾರು: ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ’ಶಲ್ಯಸಾರಥ್ಯ’ ಯಕ್ಷಗಾನ ತಾಳಮದ್ದಳೆ ಜೂ.14ರಂದು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಚಕ್ರತಾಳದಲ್ಲಿ ರಾಮ್ ಪ್ರಕಾಶ್ ಕೊಡಂಗೆ ಸಹಕರಿಸಿದರು. ಮುಮ್ಮೆಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ (ಕೌರವ), ರಾಮ್ ಪ್ರಕಾಶ್ ಕೊಡಂಗೆ (ಕರ್ಣ1), ದಿವಾಕರ ಆಚಾರ್ಯ ಹಳೆನೇರೆಂಕಿ (ಶಲ್ಯ1), ಜಯರಾಂ ಗೌಡ ಬಲ್ಯ (ಕರ್ಣ2), ಅಮ್ಮಿ ಗೌಡ ನಾಲ್ಗುತ್ತು (ಶಲ್ಯ 2), ಗಣೇಶ್ ಹಿರಿಂಜ (ಸರ್ಪಾಸ್ತ್ರ) ಸಹಕರಿಸಿದರು. ಸೇವಾರ್ಥಿಗಳಾಗಿ ಶ್ರದ್ಧಾ ಶರವೂರು ಬೆಂಗಳೂರು ಸಹಕರಿಸಿದರು.
ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹೇಮಂತ್ ಕುಮಾರ್ ರೈ ಮನವಳಿಕೆ, ದೇವಸ್ಥಾನದ ಸಿಬ್ಬಂದಿಗಳು, ಕಲಾಸಂಗಮದ ಕಲಾವಿದರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here